ಚಿತ್ರದುರ್ಗ : ಮುಖ್ಯಮಂತ್ರಿ ಯಡಿಯೂರಪ್ಪ ಅವರು ಎಲ್ಲಾ ವರ್ಗಗಳ ಜನರ ವಿಶ್ವಾಸಗಳಿಸಿದ್ದು, ಉತ್ತಮವಾಗಿ ಆಡಳಿತ ನಡೆಸುತ್ತಿದ್ದಾರೆ ಎಂದು ಡಾ.ಶಿವಮೂರ್ತಿ ಮುರುಘಾ ಶರಣರು ನುಡಿದರು.
ಈ ವೇಳೆ ಸುದ್ದಿಗೋಷ್ಠಿಯಲ್ಲಿ ಶ್ರೀಗಳು ಮಾತನಾಡಿ, ಬಿಎಸ್ವೈ ಅವರ ಆಡಳಿತಕ್ಕೆ ಕೇಂದ್ರ ಸರ್ಕಾರವೇ ಶ್ಲಾಘನೆ ವ್ಯಕ್ತಪಡಿಸಿದೆ. ಮುಖ್ಯಮಂತ್ರಿಯವರು ಈ ನಾಡು ಕಂಡ ಶ್ರೇಷ್ಠ ನಾಯಕ. ಜಾತಿಯಲ್ಲಿ ಲಿಂಗಾಯಿತರಾದರೂ ಎಲ್ಲಾ ವರ್ಗಗಳ ಜನರ ವಿಶ್ವಾಸಗಳಿಸಿ ಜನನಾಯಕರಾಗಿದ್ದಾರೆ ಎಂದರು.
ಒಟ್ಟಾರೆ ನಾಯಕತ್ವ ಬದಲಾವಣೆ ಚರ್ಚೆ ಬೆನ್ನಲ್ಲೇ ಮುರುಘಾ ಶರಣರು ಯಡಿಯೂರಪ್ಪನವರ ಬೆಂಬಲಕ್ಕೆ ನಿಂತಿದ್ದಾರೆ.