ಬಸ್ ನಿಲ್ದಾಣಕ್ಕೆ ಪುರಸಭೆ ನಿವೇಶನ

ಬಸ್ ನಿಲ್ದಾಣಕ್ಕೆ ಪುರಸಭೆ ನಿವೇಶನ

ಪಾವಗಡ: ಪಟ್ಟಣದಲ್ಲಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಪುರಸಭೆ ಹಳೇ ಸಂತೆ ಮೈದಾನ ನೀಡುವ ಕುರಿತು ಪುರಸಭೆ ಸಿಬ್ಬಂದಿ ವರ್ಗದವರು ಅಳತೆ ಮಾಡುವ ಮೂಲಕ ಪುರಸಭೆ ಅಧ್ಯಕ್ಷರು ಹಾಗೂ ಸದಸ್ಯರು ಪುರಸಭೆ ಸಿಬ್ಬಂದಿ ವರ್ಗದವರು ಸ್ಥಳ ಪರಿಶೀಲನೆ ಮಾಡಿದರು. ಮುಂದಿನ ದಿನಗಳಲ್ಲಿ ಪುರಸಭೆ ಜಾಗವನ್ನು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಖಾಲಿ ನಿವೇಶನವನ್ನು ನೀಡಲು ಸಭೆಯಲ್ಲಿ ಮಂಡಿಸಿ ನಿರ್ಣಯ ಕೈಗೊಳ್ಳಲಾಗುವುದು ಎಂಬುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ರಾಮಾಂಜಿನಪ್ಪ ಉಪಾಧ್ಯಕ್ಷೆ ಸುಧಾಲಕ್ಷ್ಮೀ ಪ್ರಮೋದ್ ಕುಮಾರ್ ಮುಖ್ಯಾಧಿಕಾರಿ ನವೀನ್ ಚಂದ್ರ ಸದಸ್ಯರಾದ ಸುದೇಶ್ ಬಾಬು, ರಾಜೇಶ್, ರವಿ, ಧನಲಕ್ಷ್ಮಿ, ಗೋವಿಂದರಾಜು, ಮಹಮದ್ ಇಮ್ರಾನ್, ವೆಂಕಟರಮಣಪ್ಪ. ನಾಗಭೂಷಣರೆಡ್ಡಿ, ಬಾಲಸುಬ್ರಮಣ್ಯಂ, ವೇಲು ರಾಜು, ವಿಜಯಕುಮಾರ್, ಮುಖಂಡರಾದ. ಕೋಳಿ ಬಾಲಾಜಿ. ಶ್ರೀನಿವಾಸ್. ಅವಿನಾಶ್, ರಿಜ್ವಾನ್, ಷಾ ಬಾಬು, ಪಿ ಮಣಿ.ಪುರಸಭೆ ಸಿಬ್ಬಂದಿ ವರ್ಗದವರು ಮೊದಲಾದವರು ಹಾಜರಿದ್ದರು.

Related