ಪ್ರಧಾನಿ ಮೋದಿ ಹೊಗಳಿದ ಭೈರತಿ ಬಸವರಾಜು

ಪ್ರಧಾನಿ ಮೋದಿ ಹೊಗಳಿದ ಭೈರತಿ ಬಸವರಾಜು

ಕೆ.ಆರ್.ಪುರ: ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ಉತ್ತಮವಾದ ೨೦ಲಕ್ಷ ಕೋಟಿ ಪ್ಯಾಕೇಜ್ ಘೋಷಿಸಿದ್ದಾರೆ ಎಂದು ಪ್ರಧಾನಿಯ ಕಾರ್ಯ ವೈಖರಿಯ ಕುರಿತು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಮೆಚ್ಚುಗೆ ವ್ಯಕ್ತಪಡಿಸಿದರು.

ಕ್ಷೇತ್ರದ ಎ.ನಾರಾಯಣಪುರ ವಾರ್ಡ್ ನ ಉದಯನಗರದಲ್ಲಿ ಬಿಜೆಪಿ ಮುಖಂಡ ಸುಬ್ಬಾರೆಡ್ಡಿ ಸಿದ್ದಪಡಿಸಿದ್ದ 1000 ದಿನಸಿ ಮತ್ತು ತರಕಾರಿ ಕಿಟ್ ಗಳನ್ನು ವಿತರಿಸಿ ನಂತರ ಮಾತನಾಡಿದರು.

ಕ್ಷೇತ್ರದಲ್ಲಿ ಕೊರೋನಾ ಎಂಬ ಸಾಂಕ್ರಾಮಿಕ ರೋಗವನ್ನು ತಡೆಯಲು ಕೊರೋನಾ ವಾರಿಯರ್ಸ್ ತಂಡ ಯಶ್ವಸಿಯಾಗಿ ಕಾರ್ಯನಿರ್ವಹಿಸುತ್ತಿದೆ. ಪ್ರತಿಯೊಬ್ಬರೂ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸದಿದ್ದಲ್ಲಿ ಸಾವು ನೋವುಗಳು ಅನುಭವಿಸಬೇಕಾಗುತ್ತದೆ ಎಂದು ಹೇಳಿದರು.

ಅನಾವಶ್ಯಕವಾಗಿ ಹೊರಗೆ ಬರದೆ ಎಲ್ಲರೂ ಮನಯಲ್ಲಿದ್ದು ಸಹಕರಿಸಿದರೆ ವೈರಸ್ ತಡೆಗಟ್ಟಬಹುದು ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯ ಸುರೇಶ್, ಆಯೋಜಕ ಸುಬ್ಬಾರೆಡ್ಡಿ, ಮತ್ತಿತ್ತರರಿದ್ದರು.

Related