ಜಲಾಶಯಕ್ಕೆ ಬಾಗಿನ ಅರ್ಪಿಸಿದ ಶಾಸಕ

ಜಲಾಶಯಕ್ಕೆ ಬಾಗಿನ ಅರ್ಪಿಸಿದ ಶಾಸಕ

ಲಿಂಗಸುಗೂರು: ಮಳೆಯಿಂದಾಗಿ ತಾಲ್ಲೂಕಿನ ನಾರಾಯಣಪುರ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು, ಶಾಸಕ ಡಿ.ಎಸ್ ಹೂಲಗೇರಿ ಬಾಗಿನ ಅರ್ಪಿಸಿ ಬಲದಂಡೆ ಮುಖ್ಯ ಕಾಲುವೆಯ ಕ್ರಸ್ಟ್‍ಗೇಟ್‍ಗೆ ಪೂಜೆ ಸಲ್ಲಿಸಿ ಕಾಲುವೆಗೆ ನೀರು ಹರಿಸಿದರು.

ನೀರಾವರಿ ಸಲಹಾ ಸಮಿತಿ ನಿರ್ಣಯದಂತೆ ರೈತರ ಜಮೀನುಗಳಿಗೆ ನೀರು ಹರಿಸಲಾಗುತ್ತಿದೆ. ಬಲದಂಡೆ ಮುಖ್ಯ ಕಾಲುವೆಯ ಆಧುನೀಕರಣ ಕೆಲಸ ನಡೆದಿದ್ದು, ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದೆ. ರೈತರ ಬೇಡಿಕೆ ಅನುಗುಣವಾಗಿ ಸಮರ್ಪಕ ನೀರು ಹರಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

ರೈತರಿಗೆ ರಸಗೊಬ್ಬರ, ಬಿತ್ತನೆ ಬೀಜ ಕೊರತೆಯಾಗದಂತೆ ನೋಡಿಕೊಳ್ಳಲು ಕೃಷಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಲಾಗಿದೆ. ಬೆಳೆನಷ್ಟ ಸೇರಿದಂತೆ ಕೆಲ ಪರಿಹಾರ ಹಣ ಜಮಾ ಮಾಡಲು ತಾಲೂಕು ಆಡಳಿತಕ್ಕೆ ಸೂಚನೆ ನೀಡಲಾಗಿದೆ. ಕೃಷ್ಣಾ ನದಿ ಪ್ರವಾಹ ಬಂದರೆ ಅಗತ್ಯ ಮುನ್ನೆಚ್ಚರಿಕೆ ಕ್ರಮವಹಿಸಲಾಗಿದೆ ಎಂದರು.

ಪಂಚಾಯತಿ ಸದಸ್ಯ ಬಸನಗೌಡ ಕಂಬಳಿ, ತಾಲೂಕು ಪಂಚಾಯತಿ ಸದಸ್ಯ ವಾಹಿದ್ ಖಾದ್ರಿ, ಭೂಪನಗೌಡ ಕರಡಕಲ್, ಶರಣಪ್ಪ ಮೇಟಿ, ಬಸನಗೌಡ ಗಣೆಕಲ್, ಅಮರೇಶ ಮೇದಿನಾಪುರ, ಪರಶುರಾಮ ನಗನೂರು, ಹೊನ್ನಪ್ಪ ಮೇಟಿ, ಆದೇಶ ನಾಯಕ ಸೇರಿ ಇತರರು ಇದ್ದರು.

Related