ಕೆಂಪೇಗೌಡ ಪುರಜ್ಯೋತಿಗೆ ಸಚಿವರಿಂದ ಚಾಲನೆ

ಕೆಂಪೇಗೌಡ ಪುರಜ್ಯೋತಿಗೆ ಸಚಿವರಿಂದ ಚಾಲನೆ

ಬೆಂಗಳೂರು: ನಾಡಪ್ರಭು ಕೆಂಪೇಗೌಡ ಪಾರಂಪರಿಕ ತಾಣದ ಅಭಿವೃದ್ಧಿ ಪ್ರಾಧಿಕಾರ, ಬಿಬಿಎಂಪಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ 514ನೇ ನಾಡಪ್ರಭು ಕೆಂಪೇಗೌಡ ಜಯಂತಿ ಅಂಗವಾಗಿ ನಗರದ ಮೇಖ್ರಿ ವೃತ್ತ ಗಡಿ ಗೋಪುರದ (ರಮಣ ಮಹರ್ಷಿ ಉದ್ಯಾನದ ಆವರಣ) ಬಳಿ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾನ್ಯ ನಗರಾಭಿವೃದ್ಧಿ ಮತ್ತು ನಗರ ಯೋಜನೆ ಇಲಾಖೆ ಸಚಿವರಾದ ಬಿ.ಎಸ್‌.ಸುರೇಶ್‌ (ಬೈರತಿ) ಅವರು ಪುರಜ್ಯೋತಿ ಬೆಳಗುವ ಮೂಲಕ ಚಾಲನೆ ನೀಡಿದರು. ಈ ವೇಳೆ ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಅಶ್ವತ್ಥನಾರಾಯಣ ಸೇರಿದಂತೆ ಪ್ರಮುಖರಿದ್ದರು.

Related