ಇದೇ ಮೊದಲ ಬಾರಿ ಪ್ರಧಾನ ಮಂತ್ರಿ ಜೊತೆ ಮಾತನಾಡಿದ್ದು: ಮಂಜುಳಾ ಲಿಂಬಾವಳಿ

ಇದೇ ಮೊದಲ ಬಾರಿ ಪ್ರಧಾನ ಮಂತ್ರಿ ಜೊತೆ ಮಾತನಾಡಿದ್ದು: ಮಂಜುಳಾ ಲಿಂಬಾವಳಿ

ಮಹದೇವಪುರ: ಇಂದು ಮಹದೇವಪುರ ವಿಧಾನಸಭಾ ಕ್ಷೇತ್ರದ ಮಾರತ್ತಹಳ್ಳಿಯ ನನ್ನ ಕಚೇರಿಯಲ್ಲಿ ಸನ್ಮಾನ್ಯ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ರವರ ವರ್ಚುವಲ್ ಸಂವಾದ ಕಾರ್ಯಕ್ರಮದಲ್ಲಿ ಮಹದೇವಪುರ ಮತಕ್ಷೇತ್ರದ ಅಭ್ಯರ್ಥಿ ಶ್ರೀಮತಿ ಮಂಜುಳ ಅರವಿಂದ ಲಿಂಬಾವಳಿ ಅವರು ಭಾಗವಹಿಸಿದರು.

ವರ್ಚುವಲ್ ಸಂವಾದ ಕಾರ್ಯಕ್ರಮ ಮುಗಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಬಿಜೆಪಿ ಅಭ್ಯರ್ಥಿ ಮಂಜುಳಾ ಲಿಂಬಾವಳಿಯವರು, ನಾನು ಇದೇ ಮೊದಲ ಬಾರಿ ಪ್ರಧಾನ ಮಂತ್ರಿ ಅವರ ಜೊತೆ ವಿಡಿಯೋ ಕಾಲ್ ನಲ್ಲಿ ಮಾತಾಡಿದ್ದು, ಚುನಾವಣೆಯಲ್ಲಿ ಪ್ರತಿ ಮನೆ ಮನೆಗೂ ತೆರಳಿ ಜನರ ಸಂಕಷ್ಟದಲ್ಲಿ ಭಾಗಿಯಾಗಬೇಕೆಂದು ತಿಳಿಸಿದರು.

ಕಳೆದ ಬಾರಿ ನನ್ನ ಪತಿ ಅರವಿಂದ್ ಲಿಂಬಾವಳಿ ಇಷ್ಟು ದಿನ ಹೇಗೆ ಸಾರ್ವಜನಿಕರ ಕರ್ತವ್ಯವನ್ನು ನಿರ್ವಹಿಸಿದ್ದಾರೆ ಅದೇ ರೀತಿ ನಾನು ಸಹ ಜನರ ಕಷ್ಟ ಸುಖಗಳಿಗೆ ಸ್ಪಂದಿಸುತ್ತೇನೆ ಎಂದು ಹೇಳಿದರು.

ಕಳೆದ ಬಾರಿ ಎಲೆಕ್ಷನ್ ನಲ್ಲೂ ಸಹ ನಾನು ನಮ್ಮ ಪತಿಯ ಜೊತೆ ಕಾರ್ಯನಿರ್ವಹಿಸಿದ್ದೇನೆ ಮತ್ತು ಪ್ರಚಾರದಲ್ಲೂ ಸಹ ತೊಡಗಿದ್ದೇನೆ ಆದ್ದರಿಂದ ಇದು ನನಗೆ ಹೊಸದೇನು ಅಲ್ಲ ಎಂದು ಮಂಜುಳಾ ಅರವಿಂದ್ ಲಿಂಬಾವಳಿಯವರು ತಿಳಿಸಿದರು

ಈ ಸಂದರ್ಭದಲ್ಲಿ ಕ್ಷೇತ್ರದ ಚುನಾವಣಾ ಉಸ್ತುವಾರಿಗಳಾದ ಶ್ರೀ ಸಚ್ಚಿದಾನಂದ ಮೂರ್ತಿ, ಚುನಾವಣಾ ಸಂಚಾಲಕರಾದ ಶ್ರೀ ರಾಜಾರೆಡ್ಡಿ, ನಗರ ಮಂಡಲ ಅಧ್ಯಕ್ಷರಾದ ಶ್ರೀ ಮನೋಹರ ರೆಡ್ಡಿ, ಗ್ರಾಮಾಂತರ ಮಂಡಲ ಅಧ್ಯಕ್ಷರಾದ ಶ್ರೀ ಬಿ. ಎನ್. ನಟರಾಜ್ ಸೇರಿದಂತೆ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Related