ಕೊಪ್ಪಳದಲ್ಲಿ JDS ಗೆಲುವಿಗೆ ಮಂಗಳಮುಖಿಯರಿಂದ ದೀರ್ಘದಂಡ ನಮಸ್ಕಾರ

ಕೊಪ್ಪಳದಲ್ಲಿ JDS ಗೆಲುವಿಗೆ ಮಂಗಳಮುಖಿಯರಿಂದ ದೀರ್ಘದಂಡ ನಮಸ್ಕಾರ

ಕೊಪ್ಪಳ: ರಾಜ್ಯದಲಿ ಚುನಾವಣೆಯ ಪ್ರಚಾರ ಬರದಿಂದ ಸಾಗುತ್ತಿದ್ದು, ಪಕ್ಷದ ನಾಯಕರ ಗೆಲುವಿಗಾಗಿ ವಿವಿಧ ರೀತಿಯ ಪ್ರಚಾರದಲ್ಲಿ ತೊಡಗಿದ್ದಾರೆ. ಇನ್ನೂ ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಸಿ ವಿ ಚಂದ್ರಶೇಖರ್ ಅವರ ಗೆಲುವಿಗಾಗಿ ನಗರದಲ್ಲಿ ಮಂಗಳಮುಖಿಯರು ಜೆಡಿಎಸ್ ಅಭ್ಯರ್ಥಿ ಗೆಲ್ಲಬೇಕೆಂದು ದೀರ್ಘದಂಡ ನಮಸ್ಕಾರ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ಕೊಪ್ಪಳ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸಿ.ವಿ. ಚಂದ್ರಶೇಖರ್ ಅವರ ಗೆಲುವಿಗಾಗಿ ನಗರದ ಮಂಗಳಮುಖಿಯರು ಇಲ್ಲಿನ ಕೊಟಗಾರಗೇರಾ ಓಣಿಯಿಂದ ಜವಾಹರ್ ರಸ್ತೆಯ ಮಾರ್ಗದ ಮೂಲಕ ಗವಿಮಠದ ವರೆಗೂ ದೀರ್ಘ ದಂಡ ನಮಸ್ಕಾರ ಹಾಕಿ ಗಮನ ಸೆಳೆದರು.

ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ಅಭ್ಯರ್ಥಿಗಳ ಗೆಲುವಿಗಾಗಿ ಹಲವಾರು ಅಭಿಮಾನಿಗಳು ಹಾಗೂ ಕಾರ್ಯಕರ್ತರು ಕಳೆದ ಕೆಲವು ದಿನಗಳಿಂದ ದೀರ್ಘ ದಂಡ ನಮಸ್ಕಾರ ಹಾಕಿ ಗಮನ ಸೆಳೆಯುತ್ತಿದ್ದಾರೆ. ಇದಲ್ಲದೆ ಜೆಡಿಎಸ್ ಅಭ್ಯರ್ಥಿ, ಸಿ.ವಿ ಚಂದ್ರಶೇಖರ್ ಅವರ ಗೆಲುವಿಗಾಗಿ ಇತ್ತೀಚೆಗೆ ಕೆಲವು ಅಭಿಮಾನಿಗಳು ಕುವೆಂಪು ನಗರದಿಂದ ಗವಿಮಠದ ಆವರಣದ ವರೆಗೂ ದೀರ್ಘ ದಂಡ ನಮಸ್ಕಾರ ಹಾಕಿ ಎಲ್ಲರ ಗಮನ ಸೆಳೆದಿದ್ದರು.

ಇಂದು (ಶುಕ್ರವಾರ) ಮತ್ತೆ ನಗರದ ಎಂಟಕ್ಕೂ ಹೆಚ್ಚು ಜನ ಮಂಗಳಮುಖಿಯರು ಜೆಡಿಎಸ್ ಅಭ್ಯರ್ಥಿ ಗೆಲುವಿಗಾಗಿ ದೀರ್ಘ ದಂಡ ನಮಸ್ಕಾರ ಹಾಕಿ ಗಮನ ಸೆಳೆದಿದ್ದಾರೆ. ದಾರಿ ಉದ್ದಕ್ಕೂ ಡೊಳ್ಳಿನ ಮೆರವಣಿಗೆ ಆರತಿಯನ್ನು ಹಿಡಿದು ಸಿವಿಸಿ ಅವರ ಗೆಲುವಿಗೆ ಜಪ ಮಾಡಿದ್ದು ಕಂಡುಬಂದಿತು.

Related