ಮಂಡ್ಯ: ಕೊರೊನಾ ನಡುವೆ ರೈತನ ಹೈಡ್ರಾಮಾ

ಮಂಡ್ಯ: ಕೊರೊನಾ ನಡುವೆ ರೈತನ ಹೈಡ್ರಾಮಾ

ಮಂಡ್ಯ: ರೈತನೊಬ್ಬ ಪೊಲೀಸ್ ಇಲಾಖೆಯ ಟ್ರಾಫಿಕ್ ಟವರ್ ಏರಿ ಆತ್ಮಹತ್ಯೆ ಬೆದರಿಕೆಯೊಡ್ಡಿದ ಘಟನೆ ಮಂಡ್ಯ ನಗರದ ಸಂಜಯ್ ವೃತ್ತದಲ್ಲಿ ನಡೆಯಿತು.

ಮದ್ದೂರು ತಾಲ್ಲೂಕಿನ ಬಿದರಮೊಳೆ ಗ್ರಾಮದ ರೈತ ಮೋಹನ್ ನಿಂದ ಆತ್ಮಹತ್ಯೆ ಬೆದರಿಕೆ.

ಬೆಕ್ಕಳಲೆ ಗ್ರಾಮದ ಪ್ರಾಥಮಿಕ ಸಹಕಾರ ಸಂಘದಲ್ಲಿ ಸಾಲಮನ್ನಾ ಯೋಜನೆಯಿಂದ ಹೊರಗಿಟ್ಟಿರೋ ಆರೋಪದ ಹಿನ್ನೆಲೆ ಸಾಲಮನ್ನಾ ಮಾಡಿಸಿಕೊಡುವಂತೆ ಒತ್ತಾಯಿಸಿದ್ದಾರೆ. ಸಾಲಮನ್ನಾ ಮಾಡದೆ ಉದ್ದೇಶಪೂರ್ವಕವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ತನ್ನ ಸಾವಿಗೆ ಪ್ರಾಥಮಿಕ ಸಂಘದ ಇಒ,ಆಡಳಿತ ಮಂಡಳಿ, ಕೊಪ್ಪ ಡಿಸಿಸಿ ಬ್ಯಾಕ್ ಮೇಲ್ವಿಚಾರಕರು ಹಾಗೂ ಡಿ.ಆರ್ ಕಾರಣರೆಂದು ಮೋಹನ್ ಪತ್ರ ಬರೆದು ಟವರ್ ಮೇಲಿರಿ ಆತ್ಮಹತ್ಯೆ ಬೆದರಿಕೆ ಹಾಕಿದ್ದು, ರೈತನ ಮನವೊಲಿಸಿ ಕೆಳಗಿಳಿಸುವಲ್ಲಿ ಅಗ್ನಿಶಾಮಕ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

Related