ಹಾಸನ: ಬೆಳ್ಳಂಬೆಳಗ್ಗೆ ಸುಖ ನಿದ್ದೆಗೆ ಜಾರಿದ್ದ ಸರ್ಕಾರಿ ಅಧಿಕಾರಿಗಳಿಗೆ ಇಂದು ಲೋಕಾಯುಕ್ತ ದಾಳಿಯ ಬಿಸಿಯನ್ನು ಮುಟ್ಟಿಸಿದ. ರಾಜ್ಯದ ಹಲವಾರು ಭ್ರಷ್ಟ ಸರ್ಕಾರೀ ನೌಕರರಿಗೆ ಸೋಮವಾರದ ಬೆಳಗು ಎಂದಿನ ಬೆಳಗಿನಂತಿರಲಿಲ್ಲ. ಲೋಕಾಯುಕ್ತ ಅಧಿಕಾರಿಗಳು ಅವರ ಮನೆಗಳ ಮೇಲೆ ದಾಳಿ ನಡೆಸಿ ಅಕ್ರಮವಾಗಿ ಗಳಿಸಿರಿವ ಆಸ್ತಿಪಾಸ್ತಿಗಳ ಪರಿಶೀಲನೆ ನಡೆಸುತ್ತಿದ್ದಾರೆ.
ಹಾಸನ ನಗರದಲ್ಲೂ ಅಧಿಕಾರಿಗಳ ರೇಡ್ ನಡೆದಿದ್ದು ಕರ್ನಾಟಕ ವಿದ್ಯತ್ ಪ್ರಸರಣ ನಿಗಮ ನಿಯಮಿತದಲ್ಲಿ ಕಿರಿಯ ಇಂಜಿನೀಯರ್ ಆಗಿ ಕೆಲಸ ಮಾಡುವ ಹೆಚ್ ಇ ನಾರಾಯಣ ಮನೆಯಲ್ಲಿ ದಾಖಲಾತಿ, ಕಾಗದ ಪತ್ರ ಪರಿಶೀಲಿಸುತ್ತಿದ್ದಾರೆ. ಹಾಸನದ ಹೊರವಲಯ ಬೊಮ್ಮನಾಯಕನಹಳ್ಳಿಯಲ್ಲಿರುವ ನಾರಾಯಣರ ಮನೆ ಚಿಕ್ಕ ಅಂಟಿಲಿಯಾಯದಂತೆ ಕಾಣುತ್ತದೆ. ಅಂದರೆ ಮಹಡಿ ಮೇಲೆ ಮಹಡಿ! ನಾರಾಯಣ ಅವರು ಗೊರೂರು ಕೆಪಿಟಿಸಿಎಲ್ ಕಚೇರಿಯಲ್ಲಿ ಉದ್ಯೋಗಿಯಾಗಿದ್ದಾರೆ. ಹಾಗಾಗಿ ಅವರ ಕಚೇರಿಯ ಮೇಲೂ ಅಧಿಕಾರಿಗಳು ನಾರಾಯಣ ಚೇಂಬರ್ ನ ಪರಿಶೀಲನೆ ನಡೆಸುತ್ತಿದ್ದಾರೆ.