ದೇಶದ‌ ಜನರ ಬದುಕು‌ ಹಸ‌ನಾಗಿದೆ: ಕೆ.ಗೋಪಾಲಯ್ಯ

ದೇಶದ‌ ಜನರ ಬದುಕು‌ ಹಸ‌ನಾಗಿದೆ: ಕೆ.ಗೋಪಾಲಯ್ಯ

ಹಾಸನ, ಜು 5: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತ್ರತ್ವದ ನಮ್ಮ ಕೇಂದ್ರ ಸರ್ಕಾರ  ಅಧಿಕಾರಕ್ಕೆ ಬಂದ ಮೇಲೆ ದೇಶದ ಜನರ ಸಂಪೂರ್ಣ ಸುಧಾರಿಸಿದೆ ಎಂದು ಅಬಕಾರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಕೆ ಗೋಪಾಲಯ್ಯ ಹೇಳಿದ್ದಾರೆ.  ಕೇಂದ್ರ ಸರ್ಕಾರದ ಯೋಜನೆಗಳ‌ ಫಲಾನುಭವಿಗಳೊಂದಿಗೆ ಕೇಂದ್ರ ಸಚಿವ ಕ್ರಿಶನ್ ಪಾಲ್ ಗುರ್ಜರ್ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,ಕೊರೊನಾ ಸಂದರ್ಭದಲ್ಲಿ ರಾಜ್ಯದ 4 ಕೋಟಿ‌ 25 ಲಕ್ಷ ಜನರಿಗೆ ನಿರಂತರವಾಗಿ ಆಹಾರ ಧಾನ್ಯ ವಿತರಿಸಿ ರಾಜ್ಯದ ಜನರು ಹಸಿವಿನಿಂದ ಇರಬಾರದು ಎನ್ನುವ ಉದ್ದೇಶ ಹೊಂದಿದ್ಧರು. ಅಂತಹ ಪ್ರಧಾನಮಂತ್ರಿನ್ನು ನಾವಿಂದು ಕಾಣುತ್ತಿದ್ದೇವೆ ಎಂದರು.

ದೇಶದ ಜನರ ಕಲ್ಯಾಣಕ್ಕಾಗಿ ಕೇಂದ್ರ ಸರ್ಕಾರ ಅನೇಕ ಮಹತ್ವದ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ.‌ದೇಶದಲ್ಲಿ ಪ್ರತಿ‌‌ ಕುಟುಂಬ ಕೂಡ ಕೇಂದ್ರ ಸರ್ಕಾರದ ಒಂದಲ್ಲ ಒಂದು ಯೋಜನೆಯ ಲಾಭ ಪಡೆದುಕೊಂಡಿದೆ ಎಂದರು.

ಹಾಸನ‌ ಜಿಲ್ಲೆಯ ಸರ್ವಾಂಗೀಣ ಪ್ರಗತಿಗೆ ರಾಜ್ಯ ಸರ್ಕಾರ ಸಾಕಷ್ಟು ಕಾರ್ಯಕ್ರಮಗಳನ್ನು ‌ಹಮ್ಮಿಕೊಂಡಿದೆ.ಇದೀಗ ಕೇಂದ್ರ ಸಚಿವರು ಜಿಲ್ಲೆಗೆ ಬಂದಿರುವುದು ಹೆಮ್ಮೆಯ ವಿಚಾರ.ಇನ್ನೂ ಮೂರು ದಿನ‌‌ ಇಲ್ಲಿಯೆ‌ ಇದ್ದು ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ ಎಂದರು.

ಶಾಸಕ ಪ್ರೀತಂಗೌಡ, ಚಿದಾನಂದಮೂರ್ತಿ, ಜಿಲ್ಲಾಧಿಕಾರಿ ಆರ್ ಗಿರೀಶ್, ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕಾಂತರಾಜ್,ಜಿಲ್ಲಾ ವರಿಷ್ಠಾಧಿಕಾರಿ ಶ್ರೀಹರಿ ರಾಮ್ ಶಂಕರ್, ಸೇರಿದಂತೆ ಪಕ್ಷದ ಹಲವಾರು ಮುಖಂಡರು ‌ಉಪಸ್ಥಿತರಿದ್ದರು.

Related