ಗ್ರಾ.ಪಂ ಚುನಾವಣೆ ಬಹಿಷ್ಕಾರ; ಆಕ್ರೋಶ

ಗ್ರಾ.ಪಂ ಚುನಾವಣೆ ಬಹಿಷ್ಕಾರ; ಆಕ್ರೋಶ

ತುಮಕೂರು: ಮೂಲಭೂತ ಸೌಕರ್ಯ ಒದಗಿಸಲು ಗ್ರಾಮ ಪಂಚಾಯತಿ ವಿಫಲವಾದ ಕಾರಣ ಕೊರಟಗೆರೆ ತಾಲ್ಲೂಕಿನ ಹೊಳವನಹಳ್ಳಿ ಕೇಂದ್ರ ಭಾಗದ ಬಸವೇಶ್ವರ ವಾರ್ಡ್‍ನ ಜನತೆ ಚುನಾವಣೆ ಬಹಿಷ್ಕರಿಸಿ ಆಕ್ರೋಶ ಹೊರಹಾಕಿದ್ದಾರೆ.

ಇಲ್ಲಿನ 1ನೇ ವಾರ್ಡ್ ನ ಬಸವೇಶ್ವರ ಬಡಾವಣೆಯಲ್ಲಿ ಸುಮಾರು 100 ಮನೆಗಳಲ್ಲಿ 250 ಮತದಾರರಿದ್ದು, ಇಲ್ಲಿಗೆ ಮೂಲಸೌಕರ್ಯವಿಲ್ಲದೇ ಜನ ಪರದಾಡುತ್ತಿದ್ದಾರೆ. ಕಳೆದ 4 ತಿಂಗಳಿಂದ ಕುಡಿಯುವ ನೀರು, ರಸ್ತೆ, ಚರಂಡಿಗಳ ವ್ಯವಸ್ಥೆ ಮರಿಚಿಕೆಯಾಗಿದೆ. 10 ಬಾರಿ ಗ್ರಾಮಪಂಚಾಯಿತಿಗೆ ಮನವಿ ಮಾಡಿದರೂ ಪಿಡಿಓ ಹಾಗೂ ವಾರ್ಡ್ ಸದಸ್ಯರ ನಿರ್ಲಕ್ಷ್ಯ ತೋರಿದ್ದಾರೆ.

ಗ್ರಾ.ಪಂ ಪಿಡಿಓ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸುವ ಸಂದರ್ಭದಲ್ಲಿ ಪಿಡಿಓ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರಹಾಕಿದರು. ಪಿಡಿಓ ಸಾರ್ವಜನಿಕರನ್ನು ಮನವೊಲಿಸುವ ಪ್ರಯತ್ನದಲ್ಲಿ ವಿಫಲವಾಗಿದ್ದು, ನಮಗೆ ನಿಮ್ಮ ಕಾರ್ಯವೈಖರಿಯಲ್ಲಿ ನಂಬಿಕೆಯಿಲ್ಲ ಎಂದ ಸ್ಥಳೀಯರು ನೇರವಾಗಿ ದೂರಿದರು.

Related