ಬೈಕ್ ಅಪಘಾತ, ಸವಾರ ಸಾವು

ಬೈಕ್ ಅಪಘಾತ, ಸವಾರ ಸಾವು

ಕೊಪ್ಪಳ: ಕನಕಗಿರಿ ತಾಲ್ಲೂಕು ಮಾದಿನಾಳ ಕ್ರಾಸ್ ಬಳಿ ಎರಡು ಬೈಕ್‍ಗಳ ನಡುವೆ ಡಿಕ್ಕಿ ಸಂಭವಿಸಿ ರಾಮಪ್ಪ ಎಂಬ ವ್ಯಕ್ತಿ ಮೃತಪಟ್ಟಿದ್ದು, ಉದಯ್ ಬಬಜ್ಜು ಎಂಬುವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಮೃತ ವ್ಯಕ್ತಿಯು ಸಿಂದನೂರು ತಾಲ್ಲುಕಿನವರೆಂದು ತಿಳಿದುಬಂದಿದೆ. ಕನಕಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related