ಕಂಬನಿ ಮಿಡಿದ ಎತ್ತು..!

  • In State
  • March 10, 2020
  • 487 Views
ಕಂಬನಿ ಮಿಡಿದ ಎತ್ತು..!

ಕಲಬುರಗಿ, ಮಾ. 10 : ಯಾನಾಗುಂದಿ ಮಾತೆ ಮಾಣಿಕೇಶ್ವರಿ ಲಿಂಗೈಕ್ಯರಾದ ಪ್ರಯುಕ್ತ ಪಟ್ಟಣದಲ್ಲಿ ಭಕ್ತರು ಏರ್ಪಡಿಸಿದ್ದ ಶ್ರದ್ಧಾಂಜಲಿ ಸ್ಥಳಕ್ಕೆ ಎತ್ತು ಬಂದು ಕಂಬನಿ ಮಿಡಿದಿದೆ…! ಪಟ್ಟಣದ ಅನೇಕ ಭಕ್ತರು ಸೇರಿಕೊಂಡು ರಾಜಾಧರ್ಮ ಪಾಲ ದೇವಡಿ ಹತ್ತಿರ (ಜೋಶಿ ಗಲ್ಲಿ) ಶ್ರದ್ಧಾಂಜಲಿ ಕಾರ್ಯಕ್ರಮ ಏರ್ಪಡಿಸಿದ್ದರು. ಅದೇ ಸಮಯದಲ್ಲಿ ಓಣಿಯಲ್ಲಿದ್ದ ಎತ್ತು ಬಂದು ಮಾತೆ ಮಾಣಿಕೇಶ್ವರ ಭಾವಚಿತ್ರದ ಮುಂದೆ ನಿಂತು ಕಣ್ಣೀರು ಸುರಿಸಿತು. ಕೋಟ್ಯಂತರ ಜನರ ಮನದಲ್ಲಿ ಅಜರಾಮರರಾದರು. ನಂತರ ಅಮ್ಮನವರು ಧ್ಯಾನ ಮಾಡುತ್ತಿದ್ದ ಒಳ ಮಂದಿರದಲ್ಲಿ ಸಮಾಧಿ 12 ಅಡಿ ಆಳದ ಲಿಂಗದ ಉದರದಲ್ಲಿ ಮಾತಾ ಮಾಣಿಕೇಶ್ವರಿ ಅಮ್ಮನವರು ಧ್ಯಾನ ಮುದ್ರೆ ಯಲ್ಲಿ ಸಮಾಧಿ. ಬೆಳಗ್ಗೆಯಿಂದಲೇ ಕಿಕ್ಕಿರಿದು ಆಗಮಿಸುತ್ತಿದ್ದ ಜನ ಅಮ್ಮನವರ ಅಂತಿಮ ದರ್ಶನ ಪಡೆದರು. ರಾಜ್ಯ ಸೇರಿ ಹೊರ ರಾಜ್ಯಗಳಿಂದ ಸುಮಾರು 3 ಲಕ್ಷ ಭಕ್ತರು ಆಗಮಿಸಿ ಅಮ್ಮನವರನ್ನು ಕಣ್ತುಂಬಿಕೊಂಡರು. ಸರ್ಕಾರದ ವತಿಯಿಂದ ಯಾದಗಿರಿ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ನೇತೃತ್ವದಲ್ಲಿ ಮಾತಾ ಮಾಣಿಕೇಶ್ವರಿ ಅಮ್ಮನವರಿಗೆ ಪೊಲೀಸ್ ಸಿಬ್ಬಂದಿ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸುವ ಮೂಲಕ ದೈವ ಗೌರವ ಸಲ್ಲಿಸಿದರು.

Related