ಮಳೆಯಿಂದ ಹಾನಿಗೊಳಗಾದ ಪ್ರದೇಶದ ಪರಿವೀಕ್ಷಣೆ

ಮಳೆಯಿಂದ ಹಾನಿಗೊಳಗಾದ ಪ್ರದೇಶದ ಪರಿವೀಕ್ಷಣೆ

ಬೊಮ್ಮನಹಳ್ಳಿ: ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಬಿಳೇಕಹಳ್ಳಿ ವಾರ್ಡ್ ನ ಅನುಗ್ರಹ ಲೇಔಟ್ ಫೇಸ್-2 , ಇಬ್ಬಲೂರಿನ ಸನ್ ಸಿಟಿ ಅಪಾಟ್ಮೆಂಟ್ ನ ಪ್ರದೇಶ ಮತ್ತು ಹೆಚ್.ಎಸ್.ಆರ್ ಬಡಾವಣೆಯ 6ನೇ ಸೆಕ್ಟರ್ ನಲ್ಲಿ ಜರುಗುತ್ತಿರುವ SWM ಕಾಮಗಾರಿಯ ಸ್ಥಳಕ್ಕೆ ಶಾಸಕರಾದ ಎಂ ಸತೀಶ್‌ ರೆಡ್ಡಿ ಹಾಗೂ ಬಿಬಿಎಂಪಿ ಆಯುಕ್ತರಾದ ಶ್ರೀ ತುಷಾರ್ ಗಿರಿನಾಥ್ ಅವರೊಂದಿಗೆ ಮಳೆಯಿಂದ ಹಾನಿಗೊಳಗಾದ ಪ್ರದೇಶದ ಪರಿವೀಕ್ಷಣೆ ಮಾಡಿದರು.

ಒತ್ತುವರಿಯಂತಹ ಅಡೆತಡೆಗಳನ್ನು ನಿವಾರಿಸುವ ಸಲುವಾಗಿ ಅದನ್ನು ತೆರವು ಮಾಡುವಂತಹ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದರು.

ರಾಜಕಾಲುವೆಗಳಿಗೆ ಗೇಟ್ ಗಳನ್ನು ಸಹ ಅಳವಡಿಸುವಂತೆ ಆಯುಕ್ತರ ಗಮನಕ್ಕೂ ತರಲಾಯಿತು.

ಈ ಸಂದರ್ಭದಲ್ಲಿ ಬೊಮ್ಮನಹಳ್ಳಿ ವಲಯದ ಬಿಬಿಎಂಪಿ ಜಂಟಿ ಆಯುಕ್ತರಾದ ಕೃಷ್ಣ ಮೂರ್ತಿ ಅವರು ಬಿಬಿಎಂಪಿ ಅಧಿಕಾರಿಗಳು ಉಪಸ್ಥಿತರಿದ್ದರು.

Related