ಕುಂಠಿತಗೊಂಡ ಅಭಿವೃದ್ಧಿ ಕಾರ್ಯ

ಕುಂಠಿತಗೊಂಡ ಅಭಿವೃದ್ಧಿ ಕಾರ್ಯ

ಕಮಲನಗರ :ತಾಲ್ಲೂಕಿನ ಹೋಳಸಮುದ್ರ ಗ್ರಾ.ಪಂ ಎಲ್ಲಾ ಸದಸ್ಯರ ಮತ್ತು ಗ್ರಾಮಸ್ಥರ ಪರಿಶ್ರಮದಿಂದ ಗ್ರಾಮವನ್ನು ಸರ್ವಾಂಗೀಣ ಅಭಿವೃದ್ಧಿ ಮಾಡುತ್ತೇವೆಂದು ಗ್ರಾಮದ ಮುಖಂಡ ರಾಹುಲ ಪಾಟೀಲ್ ತಿಳಿಸಿದರು.
ಮಂಗಳವಾರ ಸಭೆ ನಡೆಸಿ ಮಾತನಾಡಿ, ಎರಡು ತಿಂಗಳಿಂದ ಪಿ.ಡಿ.ಓ ವಿಜಯ್ ಕುಮಾರ್ ಅನಾರೋಗ್ಯದಿಂದ ಬಳಲುತ್ತಿದ್ದಾರೆ, ಇದರಿಂದ ಪಿ.ಡಿ.ಓ ಧೋಂಡಿಬಾ ಅವರನ್ನು ತಾತ್ಕಾಲಿಕವಾಗಿ ನೇಮಕ ಮಾಡಲಾಗಿದ್ದು, ಇವರು ಗ್ರಾಮದ ಜನರಿಗೆ ಸರಿಯಾದ ಸ್ಪಂದನೆ ನೀಡುತ್ತಿಲ್ಲವೆಂದು ದೂರಿದರು.
ಈ ಸಂದರ್ಭದಲ್ಲಿ ಗ್ರಾಮ್ ಪಂಚಾಯತ್ ಉಪಾಧ್ಯಕ್ಷ ಫರಜಾನಾ, ಗ್ರಾ.ಪಂ.ಸದಸ್ಯರುಗಳಾದ ರಾಹುಲ್ ಪಾಟೀಲ, ಕೃಷ್ಣ ಕಾಳೆ, ಸತೀಷ ಭೂರೆ, ಮಹೇಶ ಬಾವಗೆ, ಯೊಗೀತಾ ಮಾರುತಿ ಆಳಂದೆ, ಸಾರಿಕಾ ಮಾಸಿಮಾಡೆ, ಸುನೀತಾ ಅಂಕುಶ ಗಾಯಕವಾಡ, ಲಕ್ಷ್ಮೀಬಾಯಿ, ಅನಿತಾ ದಿಲೀಪ್ ಖೋಂಡೆ ಹಾಗು ಪ್ರದೀಪ ಪಾಟೀಲ, ಭಿಮ ಇತರರಿದ್ದರು.

Related