ಸಿದ್ದರಾಮಯ್ಯ ಗರ್ವ ಭಂಗ ಆಗಬೇಕಾದರೆ ನಾವೆಲ್ಲರೂ ಛಲದಿಂದ ಕೆಲಸ ಮಾಡಬೇಕು: ಮಾಜಿ ಪ್ರಧಾನಿ

ಸಿದ್ದರಾಮಯ್ಯ ಗರ್ವ ಭಂಗ ಆಗಬೇಕಾದರೆ ನಾವೆಲ್ಲರೂ ಛಲದಿಂದ ಕೆಲಸ ಮಾಡಬೇಕು: ಮಾಜಿ ಪ್ರಧಾನಿ

ಬೆಂಗಳೂರು: ಅಧಿಕಾರದ ಅಮಲಿನಲ್ಲಿ ಸಿದ್ದರಾಮಯ್ಯ ಅವರು ರಾಜಕೀಯ ಮಾಡುತ್ತಿದ್ದಾರೆ. ಅಧಿಕಾರದ  ಅಮಲು ಬಿಟ್ಟು ರಾಜ್ಯದಲ್ಲಿರುವ ಕೊರತೆಗಳನ್ನು ನಿವಾರಿಸಬೇಕೆಂದು ಮಾಜಿ ಪ್ರಧಾನಿ ದೇವೇಗೌಡ ಅವರು ಸಿದ್ದರಾಮಯ್ಯ ಅವರ ವಿರುದ್ಧ ಗುಡುಗಿದ್ದಾರೆ.

ನಗರದಲ್ಲಿ ಇಂದು ನಡೆದ ಬಿಜೆಪಿ ಮತ್ತು ಜೆಡಿಎಸ್ ನಾಯಕರುಗಳ ಜಂಟಿ ಸಭೆಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಗರ್ವ ಭಂಗ ಆಗಬೇಕಾದರೆ ನಾವೆಲ್ಲರೂ ಛಲದಿಂದ, ಒಟ್ಟಾಗಿ ಹೋಗಬೇಕು ಎಂದು ಹೇಳಿದರು. ಇದಕ್ಕೆ ಆಯ್ತು ಅಲ್ಲಿಂದಲೇ ಗೆಲುವು ಶುರು ಮಾಡೋಣ ಎಂದು ಜಿ.ಟಿ. ದೇವೇಗೌಡ ಸಮ್ಮತಿ ಸೂಚಿಸಿದರು.

ಯಡಿಯೂರಪ್ಪನವರೇ, ಯಾವ ಸಂದರ್ಭದಲ್ಲಿ ಏನಾಗಿದೆ ಅಂತ ಹೇಳ್ತೇನೆ ಕೇಳಿ. ನನ್ನನ್ನೇ ತುಮಕೂರಿನಲ್ಲಿ ಸೋಲಿಸ್ತಾರೆ. ಯಾವ ಸಮಾಜಕ್ಕೆ ನಾನು ಏನು ಮಾಡಿದ್ದೇನೆ ಅಂತ ಕೇಳ್ತಾರೆ. ನಾನು ಯಾವ ಕ್ಷೇತ್ರಕ್ಕೆ ಬೇಕಾದ್ರೂ ಹೋಗ್ತೀನಿ. ನನ್ನ ಅಳಿಯ ಬಂದಿಲ್ಲ ಅಂತ ಕಾಣುತ್ತೆ. ಇಲ್ಲಲ್ಲಾ ಬೇರೆ ಕಡೆ ಮಾತನಾಡ್ತೀನಿ ಯಡಿಯೂರಪ್ಪನವರೇ.. ನನಗೆ ನನ್ನ ಮಂಡಿ ನೋವು ಇದ್ದರೂ ಪರವಾಗಿಲ್ಲ ಎಂದು ಗುಡುಗಿದರು.

 

Related