ಮತ್ತೆ ಬಿಜೆಪಿ ಗಾಳಕ್ಕೆ ಬೀಳುವ ಆಸಾಮಿ ನಾನಲ್ಲ: ಸವದಿ

ಮತ್ತೆ ಬಿಜೆಪಿ ಗಾಳಕ್ಕೆ ಬೀಳುವ ಆಸಾಮಿ ನಾನಲ್ಲ: ಸವದಿ

ದೆಹಲಿ: ಕೇಂದ್ರ ಸರ್ಕಾರ ನಮ್ಮ ಕರ್ನಾಟಕ ರಾಜ್ಯಕ್ಕೆ ತೆರಿಗೆ ಹಂಚಿಕೆ ವಿಚಾರದಲ್ಲಿ ಬಹಳ ಅನ್ಯಾಯವೆಸಗಿದೆ. ಹಾಗಾಗಿ ನಾವು ಅನ್ಯಾಯದ ವಿರುದ್ಧ ಹೋರಾಟ ಮಾಡುತ್ತಿದ್ದೇವೆ ಎಂದು ಕಾಂಗ್ರೆಸ್ ನ ಶಾಸಕ ಲಕ್ಷ್ಮಣ್ ಸವದಿ ಅವರು ಹೇಳಿದ್ದಾರೆ.

ದೆಹಲಿಯಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮೊದಲು ನಮಗೆ ಬರಬೇಕಾದ ಅನುದಾನವನ್ನು ನೀಡಲಿ ಆಮೇಲೆ ಬಿಜೆಪಿಗೆ ನಾವೇನೇ ಎಂದು ತೋರಿಸುತ್ತೇವೆ ಎಂದು ಹೇಳಿದರು.

ಬಿಜೆಪಿಯವರಿಗೆ ಈಗ ನನ್ನ ಅವಶ್ಯಕತೆ ಇರಬಹುದು ಆದರೆ ನಾನು ಮತ್ತೆ ಬಿಜೆಪಿಯವರ ಗಾಳಕ್ಕೆ ಬೀಳುವ ಆಸಾಮಿ ನಾನಲ್ಲ ಎಂದು ಬಿಜೆಪಿಯವರಿಗೆ ಟಾಂಗ್ ನೀಡಿದ್ದಾರೆ. ನಾನು ಮತ್ತೆ ಬಿಜೆಪಿಗೆ ಮರು ಸೇರ್ಪಡೆಯಾಗಬೇಕಾಗಿದ್ದರೆ ಈ ಪ್ರತಿಭಟನೆಗೆ ನಾನು ಯಾಕೆ ಬರಬೇಕಿತ್ತು ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಪಕ್ಷವು ನನ್ನನ್ನು ಗೌರವದಿಂದ ಬರ ಮಾಡಿಕೊಂಡಿದೆ. ನನಗೆ ಆಶ್ರಯ ನೀಡಿದೆ ಅಂತ ಸವದಿ ಹೇಳಿದ್ರು. ಸಿಎಂ, ಡಿಸಿಎಂ ಆಗಿರಬಹುದು, ಮಂತ್ರಿ ಮಂಡಲದ ಸಚಿವರು ಆಗಿರಬಹುದು ಎಲ್ಲರೂ ಗೌರವದಿಂದ ನಡೆಸಿಕೊಳ್ತಿದ್ದಾರೆ. ಇಂತ ಹೊತ್ತಲ್ಲಿ ಈ ಪಾರ್ಟಿ ಬಿಟ್ಟು ಬೇರೆ ಕಡೆ ಹೋಗೋದಕ್ಕೆ ನನಗೇನು ಹುಚ್ಚು ಹಿಡಿದಿದೆಯಾ? ಅಂತ ಅವರು ಪ್ರಶ್ನಿಸಿದ್ದಾರೆ.

Related