ನನ್ನ ವಿರುದ್ಧ 100 ಪ್ರಕರಣಗಳು ದಾಖಲಾದರು ನಾನು ಹೆದರಲ್ಲ ಈಶ್ವರಪ್ಪ

ನನ್ನ ವಿರುದ್ಧ 100 ಪ್ರಕರಣಗಳು ದಾಖಲಾದರು ನಾನು ಹೆದರಲ್ಲ ಈಶ್ವರಪ್ಪ

ಶಿವಮೊಗ್ಗ: ಕೆ ಎಸ್‌ ಈಶ್ವರಪ್ಪ ಅವರ ಮೇಲೆ ಮತ್ತೊಂದು ಎಫ್​ ಐಆರ್ ಪ್ರಕರಣ ದಾಖಲಾಗಿರುವುದರಿಂದ ಇದರ ಬಗ್ಗೆ ಪ್ರತಿಕ್ರಿಯೆ ನೀಡಿದ ಕೆಎಸ್ ಈಶ್ವರಪ್ಪ ಅವರು, ನನ್ನ ವಿರುದ್ದ ಇಂತಹ ನೂರು ಪ್ರಕರಣಗಳನ್ನು ದಾಖಲಿಸಿದರು ಕೂಡ ನಾನು ಹೆದರುವ ಅಸಾಮಿ ಅಲ್ಲ ಎಂದು ಹೇಳಿದ್ದಾರೆ.

ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ್ರೋಹಿ ಹೇಳಿಕೆಯ ನೀಡುವವರ ವಿರುದ್ಧ ಯಾವುದೇ ಪ್ರಕರಣ ದಾಖಲು ಮಾಡಲ್ಲ. ಆದರೆ ನನ್ನ ಮೇಲೆ ಇತರ ಪ್ರಕರಣ ದಾಖಲು ಮಾಡಿ ನನ್ನನ್ನು ಹೆದರಿಸಲು ಪ್ರಯತ್ನ ಪಡುತ್ತಿದ್ದಾರೆ. ಆದರೆ ನಾನು ಇಂಥ ನೂರು ಪ್ರಕರಣಗಳ ಬಂದರೂ ಕೂಡ ಯಾವುದೇ ಕಾರಣಕ್ಕೂ ಹೆದರಲ್ಲ ಎಂದು ಹೇಳಿದ್ದಾರೆ.

ಸಂಸದ ಡಿ.ಕೆ ಸುರೇಶ್‌ ಅವರಿಗೆ ಮೊದಲು ನೋಟಿಸ್ ನೀಡಲಿ. ನನ್ನ ಹೇಳಿಕೆ ಇಟ್ಟುಕೊಂಡು ಕಾಂಗ್ರೆಸ್ ಗೊಂದಲ ಸೃಷ್ಟಿ ಮಾಡುತ್ತಿದೆ. ನಾನು ಎಲ್ಲೂ ಡಿ.ಕೆ ಸುರೇಶ್ ಅವರಿಗೆ ಗುಂಡಿಕ್ಕಿ ಕೊಲ್ಲಿ ಎಂದು ಹೇಳಿಲ್ಲ. ಹೊಸ ಕಾನೂನು ತನ್ನಿ ಎಂದು ಹೇಳಿರುವುದಷ್ಟೇ. ಸದ್ಯ ನನ್ನ ಪುಣ್ಯ ನಾನು ದೇಶದ್ರೋಹಿ ಎಂದು ಯಾರು ಹೇಳಿಲ್ಲ ಎಂದರು.

ನನಗೆ ನೋಟಿಸ್ ಬಂದಿದ್ದು, ಕಾನೂನು ಬದ್ದವಾಗಿ ಏನು ಮಾಡಬೇಕು ಅದನ್ನು ಮಾಡುತ್ತೇನೆ. ನನಗೆ ಇನ್ನೂ ನೂರು ನೋಟಿಸ್ ನೀಡಿ. ನನ್ನ ಅಭ್ಯಂತರವೇನಿಲ್ಲ. ಆದರೆ ಡಿ.ಕೆ ಸುರೇಶ್ ಗೆ ಯಾಕೆ ನೋಟಿಸ್ ನೀಡಿಲ್ಲ ಎಂದು ಪ್ರಶ್ನಿಸಿದ ಅವರು, ಈ ದೇಶಕ್ಕಾಗಿ ತಮ್ಮ ಪ್ರಾಣವನ್ನು ಬಲಿದಾನ ನೀಡಿದವರ ಬಗ್ಗೆ ಡಿ.ಕೆ ಸುರೇಶ್ ಅವರಿಗೆ ತಿಳಿದಿಲ್ಲ. ನನ್ನ ಮಾತನ್ನು ತಿರುಚುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.

 

Related