ವಿಜಯಪುರ: ಅನೈತಿಕ ಸಂಬಂಧದ ಹಿನ್ನೆಲೆ, ಪತಿಯೇ ಪತ್ನಿಯನ್ನು ಕೊಡಲಿಯಿಂದ ಕೊಚ್ಚಿ ಕೊಲೆಗೈದಿರುವ ಘಟನೆ ಇಂಡಿ ಪಟ್ಟಣ ಹೊರವಲಯದ ಹಂಜಗಿ ರಸ್ತೆಯ ತೋಟದ ವಸ್ತಿಯಲ್ಲಿ ನಡೆದಿದೆ.
ಭುವನೇಶ್ವರಿ ಮಾಳಪ್ಪ ಪೂಜಾರಿ 25 ಹತ್ಯೆಯಾಗಿರುವ ಪತ್ನಿ. ಹತ್ಯೆಗೈದ ಪಾಪಿ ಪತಿ ಮಾಳಪ್ಪ ಪೂಜಾರಿ. ಈತನೇ ಖುದ್ದಾಗಿ ಠಾಣೆಗೆ ಹೋಗಿ ಕೊಲೆಗೈದಿರುವ ವಿಚಾರ ಪೊಲೀಸರಿಗೆ ತಿಳಿಸಿದ್ದಾರೆ.
ಇಂಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.