ವ್ಯಾಪಾರಿಗಳಿಗೆ ಶಾಸಕರಿಂದ ಸಹಾಯ ಹಸ್ತ

ವ್ಯಾಪಾರಿಗಳಿಗೆ ಶಾಸಕರಿಂದ ಸಹಾಯ ಹಸ್ತ

ವಿಜಯಪುರ : ವಿಜಯಪುರದ ಕೇಂದ್ರ ಬಸ್ ನಿಲ್ದಾಣ ಬಳಿ ಕೆ.ಸಿ.ಮಾರುಕಟ್ಟೆ ಹತ್ತಿರ ವಿದ್ಯುತ್ ಅವಘಡ ಸಂಭವಿಸಿ ಬೆಂಕಿಗೆ ಆಹುತಿಯಾಗಿದ್ದ ಅಂಗಡಿಗಳಿಗೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಭೇಟಿ ನೀಡಿ, ಪರಿಶೀಲನೆ ನಡೆಸಿದರು.

ಬಳಿಕ ಶಾಸಕ ಯತ್ನಾಳ್ ನಷ್ಟ ಅನುಭವಿಸಿದ ವ್ಯಾಪಾರಿಗಳಿಬ್ಬರಿಗೆ ಶಾಸಕ ಯತ್ನಾಳ ತಲಾ 25 ಸಾವಿರ ವೈಯಕ್ತಿಕ ಪರಿಹಾರ ನೀಡಿ, ಆದಷ್ಟು ಬೇಗ ಸರ್ಕಾರದಲ್ಲೂ ಪರಿಹಾರ ನೀಡುವ ಭರವಸೆ ನೀಡಿದರು.

ಕೆ.ಸಿ.ಮಾರ್ಕೆಟ್‌ನಲ್ಲಿರುವ ಕಣಮಣಿ, ಕಿಶೋರ್ ಎಂಬುವರ ಅಂಗಡಿಗಳು ಆಕಸ್ಮಿಕವಾಗಿ ಬೆಂಕಿಗಾಹುತಿಯಾಗಿದ್ದವು. ಇದನ್ನು ಅರಿತ ಶಾಸಕ ಯತ್ನಾಳ ಅಂಗಡಿಯ ಮಾಲೀಕರಿಗೆ ಧೈರ್ಯ ತುಂಬಿ, ಪರಿಹಾರ ಧನ ನೀಡಿದರು.

Related