ಕೇಂದ್ರದ ನದಿಜೋಡಣೆಗೆ ಹೆಚ್​.ಡಿ ದೇವೇಗೌಡರ ಆಕ್ಷೇಪ..

ಬೆಂಗಳೂರು: ಕೇಂದ್ರದ ನದಿಜೋಡಣೆಗೆ ಮಾಜಿ ಪ್ರಧಾನಿ ಹೆಚ್​.ಡಿ.ದೇವೇಗೌಡರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕಾವೇರಿ ಮತ್ತು ಪೆನ್ನಾರ್ ನದಿ ಜೋಡಣೆಗೆ ಹೆಚ್​ಡಿಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.


ನಮಗೆ ಮೇಕೆದಾಟು ಯೋಜನೆಯೇ ಮುಖ್ಯ. ಕಾವೇರಿ, ಪೆನ್ನಾರ್ ಹಾಗೂ ಗುಂಡಾರ್ ನದಿ ಜೋಡಣೆ ಮಾಡುವುದು ಬೇಡ. ನದಿಜೋಡಣೆಗೆ ಕೈಹಾಕಿದರೆ ಹೋರಾಟ ಅನಿವಾರ್ಯ ಎಂದು ಕೇಂದ್ರ ಸರ್ಕಾರಕ್ಕೆ ಮಾಜಿ ಪ್ರಧಾನಿ ಹೆಚ್​.ಡಿ.ದೇವೇಗೌಡರು ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ನಿನ್ನೆ ನಡೆದಿದ್ದ ಜಲಧಾರೆ ಕಾರ್ಯಕ್ರಮದಲ್ಲಿ ಎಚ್ಚರಿಕೆ ನೀಡಿದ್ದಾರೆ.

ಕೇಂದ್ರ ಸರ್ಕಾರ ಬಜೆಟ್​ನಲ್ಲಿ ನದಿ ಜೋಡಣೆಗೆ ಹಣ ಬಿಡುಗಡೆ ಮಾಡಿದೆ. ಇದೀಗ ಚುನಾವಣೆ ಹೊತ್ತಲ್ಲೇ ಕೇಂದ್ರದ ಘೋಷಣೆಗೆ ದೇವೇಗೌಡರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

Related