ಗಂಧದ ಮರಕ್ಕಾಗಿ : ಮಾಲೀಕನ ಕೊಲೆ

ಗಂಧದ ಮರಕ್ಕಾಗಿ : ಮಾಲೀಕನ ಕೊಲೆ

ಚಾಮರಾಜನಗರ : ಗಂಧದ ಮರ ಕದಿಯಲು ಬಂದ ಕಳ್ಳರು ಸಮೀಪದಲ್ಲೇ ಮಲಗಿದ್ದ ಮನೆಯ ಮಾಲೀಕನನ್ನು ಹೊತ್ತೊಯ್ದು ಕೊಲೆ ಮಾಡಿ ಪರಾರಿಯಾಗಿದ್ದಾರೆ.

ಚಂದಕವಾಡಿ ಗ್ರಾಮದಲ್ಲಿ ಭಾನುವಾರ ರಾತ್ರಿ ಈ ದರ್ಘಟನೆ ಸಂಭವಿಸಿದ್ದು, ದುಷ್ರ‍್ಮಿಗಳ ಕೃತ್ಯಕ್ಕೆ 80 ವರ್ಷದ ಶಿವಬಸಪ್ಪ ಬಲಿಯಾಗಿದ್ದಾರೆ.

ಶಿವಬಸಪ್ಪ ಅವರ ಮನೆ ಆವರಣದಲ್ಲಿ ಗಂಧದ ಮರ ಕಾಯುತ್ತಿದ ಮನೆ ಮುಂದೆ ವೃದ್ಧ ಮಲಗಿದ , ಮನೆಯ ಅನತಿ ದೂರದಲ್ಲಿ ಶಿವಬಸಪ್ಪರ ಶವ ಪತ್ತೆಯಾಗಿದೆ.  ಕೈ ಕಾಲು ಕಟ್ಟಿ ಕುತ್ತಿಗೆಗೆ ಟವೆಲ್ ಬಿಗಿದು ಕೊಲೆ ಮಾಡದ್ದಾರೆ. ಶಬ್ದ ಕೇಳಿ ಬಾಗಿಲು ಮುರಿದು ಮನೆಯವರು ಹೊರಬರುತ್ತಿದ್ದಂತೆ ಕಳ್ಳರು ಪರಾರಿಯಾಗಿದ್ದಾರೆ.

ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಅನಿತಾ ಹದ್ದಣ್ಣವರ್ ಭೇಟಿ ನೀಡಿದರು. ನಗರದ ಪರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದರು.

Related