ಶೃಂಗೇರಿ : ಲಂಚಕ್ಕಾಗಿ ಬೇಡಿಕೆ ಇಟ್ಟ ಆರೋಪದ ರಾಜ್ಯದ ಸಚಿವರ ಪಿಎ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಶೃಂಗೇರಿಯ ಜೆಎಂಎಫ್ಸಿ ನ್ಯಾಯಾಲಯ ಕೂಡ ಸರ್ಕಾರಿ ಅಧಿಕಾರಿ ದೂರು ಸಲ್ಲಿಸಿದ ಹಿನ್ನೆಲೆ ಪೋಲೀಸರು ಎಫ್ಐಆರ್ ದಾಖಲು ಮಾಡಿದ್ದಾರೆ.
ಗಂಗಾಧರ್ ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದರೆಂದು ಶೃಂಗೇರಿಯ ಸಬ್ ರಿಜಿಸ್ಟಾರ್ ಎಚ್.ಎಸ್ ಚೆಲುವರಾಜು ಶೃಂಗೇರಿ ಠಾಣೆಗೆ ದೂರು ಸಲ್ಲಿಸಿದ್ದರು.
ಪ್ರಭಾವಿ ಸಚಿವರೊಬ್ಬರ ಪಿಎ ಆಗಿರುವ ಗಂಗಾಧರ್ ವಿರುದ್ಧ ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ಪೋಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಇತ್ತ ಪ್ರಕರಣ ಬೆಳಕು ಕಾಣುತ್ತಿದ್ದಂತೆ ಸಚಿವರು ಗಂಗಾಧರ್ ಅವರನ್ನು ತಮ್ಮ ಪಿಎ ಸ್ಥಾನದಿಂದ ತೆಗೆದು ಹಾಕಿದ್ದಾರೆ ಎಂದರು.