ಬೆಂಗಳೂರು: ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ವಿರೋಧಿಸಿ ಬೆಂಗಳೂರಿನಲ್ಲಿ ರೈತರು ಬೃಹತ್ ಪ್ರತಿಭಟನೆ ಕೈಗೊಂಡಿದ್ದು, ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿದ್ದಾರೆ.
ಮೆಜೆಸ್ಟಿಕ್ನ ಆನಂದರಾವ್ ಸರ್ಕಲ್ ಬಳಿಯಿಂದ ಹೊರಟ ರ್ಯಾಲಿಯು ಫ್ರೀಡಂ ಪಾರ್ಕ್ ತಲುಪಲಿದ್ದು, ಸರ್ಕಾರದ ವಿರುದ್ಧ ರೈತರು ಆಕ್ರೋಶ ಗೊಂಡಿದ್ದಾರೆ.
ರೈತರ ಪರ ಹೋರಾಟಗಾರ ಕೋಡಿಹಳ್ಳಿ ಚಂದ್ರಶೇಖರ್ ಅವರಿಗೆ ಅವಿವೇಕಿ ಎಂದಿದ್ದಾರೆ. ಆದರೆ ನಿಜವಾದ ಅವಿವೇಕಿ ಕೃಷಿ ಸಚಿವ ಬಿ.ಸಿ ಪಾಟೀಲ್ ಎಂದು ರೈತ ಮಹಿಳೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಸಿ ರೂಮ್ನಲ್ಲಿ ಕುಳಿದು ಕಾಯ್ದೆ ತಿದ್ದುಪಡಿ ಮಾಡುವುದಲ್ಲ. ರೈತರ ಸಂಕಷ್ಟ ಅರ್ಥಮಾಡಿಕೊಳ್ಳದಿರುವ ಸರ್ಕಾರ ರೈತ ಪರ ಸರ್ಕಾರ ಎಂದು ಬಾಯಿಮಾತಿಗೆ ಹೇಳುತ್ತಿದ್ದಾರೆ ಎಂದು ರೈತರು ಕಿಡಿಕಾರಿದ್ದಾರೆ