ದಕ್ಷಿಣ ವಲಯದಲ್ಲಿ ಇಂಜಿನಿಯರ್ ಗಳ ದಿನಾಚರಣೆ

ದಕ್ಷಿಣ ವಲಯದಲ್ಲಿ ಇಂಜಿನಿಯರ್ ಗಳ ದಿನಾಚರಣೆ

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ದಕ್ಷಿಣ ವಲಯದ ಯಡಿಯೂರು ವಾರ್ಡ್ ವ್ಯಾಪ್ತಿಯಲ್ಲಿ ಭಾರತ ರತ್ನ ಸರ್. ಎಂ.ವಿಶ್ವೇಶ್ವರಯ್ಯ ರವರ ಜಯಂತ್ಯೋತ್ಸವ – ಇಂಜಿನಿಯರ್ ಗಳ ದಿನಾಚರಣೆ ಅಂಗವಾಗಿ ಸೌತ್ ವೃತ್ತದ ಬಳಿಯ ಆರ್.ವಿ ರಸ್ತೆಯ ರಣಧೀರ ಕಂಠೀರವ ಉದ್ಯಾನದಲ್ಲಿರುವ ವಿಶ್ವೇಶ್ವರಯ್ಯರವರ ಪ್ರತಿಮೆಗೆ ವಲಯ ಆಯುಕ್ತರಾದ ಶ್ರೀ ಜಯರಾಮ್ ರಾಯಪುರ್ ರವರು ಮಾಲಾರ್ಪಣೆ ಮಾಡಿ ಪುಷ್ಪನಮನ ಅರ್ಪಿಸಿದರು.

ಈ ವೇಳೆ ವಲಯ ಜಂಟಿ ಆಯುಕ್ತರಾದ ಜಗದೀಶ್ ನಾಯ್ಕ್, ವಲಯ ಮುಖ್ಯ ಅಭಿಯಂತರರಾದ ಮೋಹನ್ ಕೃಷ್ಣಾ ಹಾಗೂ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.

Related