ವಿಧಾನಸಭೆಗೆ ಯೋಗ್ಯರನ್ನು ಆಯ್ಕೆ ಮಾಡಿ: ಸತೀಶ್ ರೆಡ್ಡಿ

ವಿಧಾನಸಭೆಗೆ ಯೋಗ್ಯರನ್ನು ಆಯ್ಕೆ ಮಾಡಿ: ಸತೀಶ್ ರೆಡ್ಡಿ

ಬೆಂಗಳೂರು: ಇಂದು ಕರ್ನಾಟಕ ವಿಧಾನಸಭಾ ಚುನಾವಣೆಯ ಮತದಾನದ ದಿನವಾಗಿದ್ದು ನಾನು ಬಿಜೆಪಿ ಅಭ್ಯರ್ಥಿಯಾಗಿ ಎನ್ ಸತೀಶ್ ರೆಡ್ಡಿ ಎಲ್ಲಾ ಮತದಾರ ಕೇಂದ್ರದ ಬಳಿ ಹೋಗಿ ನೋಡಿದ್ದೇನೆ, ನಮ್ಮ ಕಾರ್ಯಕರ್ತರು, ಬಿಜೆಪಿ ಮುಖಂಡರು ಬಹಳ ಉತ್ಸಾಹದಿಂದ ಮತವನ್ನು ಕೇಳುತ್ತಿದ್ದಾರೆ.  ಪ್ರತಿಯೊಬ್ಬ ಮತದಾರರು ಸಹ ಇದೇ ರೀತಿ ಉತ್ಸಾಹದಿಂದ ಬಂದು ಮತದಾನ ಮಾಡುತ್ತಿದ್ದಾರೆ.

ವರುಣದೇವ ಇಂದು ಸಂಜೆವರೆಗೂ ಬರದೆ ಇದ್ದರೆ ಒಳ್ಳೆ ಫಲಿತಾಂಶ ಬರಲಿದೆ ಎಂದು ಬೊಮ್ನಳ್ಳಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂ ಸತೀಶ್ ರೆಡ್ಡಿ ಅವರು ಮತದಾನ ಮಾಡಿ ಮಾಧ್ಯದೊಂದಿಗೆ ಮಾತನಾಡಿದರು.

ಬೆಂಗಳೂರು ಮತ್ತು ಬೊಮ್ಮನಹಳ್ಳಿ ಹಾಗೂ ಎಲ್ಲಾ ಕರ್ನಾಟಕದ ಮತದಾರರಲ್ಲಿ ನಾನು ಕೇಳಿಕೊಳ್ಳುವುದೇನೆಂದರೆ ದಯವಿಟ್ಟು ಎಲ್ಲರೂ ಹೊರಗಡೆ ಬಂದು ತಮ್ಮ ಅಮೂಲ್ಯವಾದ ಮತವನ್ನು ಚಲಾಯಿಸಿ ಯೋಗ್ಯವಾದ ವ್ಯಕ್ತಿಯನ್ನು ಆರಿಸಿ ತಂದರೆ ಮಾತ್ರ ಮುಂದೆ ನಿಮಗೆ ಅಭಿವೃದ್ಧಿ ಕೆಲಸಗಳನ್ನು ಕೇಳಲು ಮಾತ್ರ ಅವಕಾಶವಿರುತ್ತದೆ ಎಂದರು.

Related