ವಿವಿಧ ಕಾಮಗಾರಿಗೆ ಚಾಲನೆ

ವಿವಿಧ ಕಾಮಗಾರಿಗೆ ಚಾಲನೆ

ಹೊಸಕೋಟೆ:ತಾಲೂಕಿನ ಜಡಿಗೇನಹಳ್ಳಿ ಹೋಬಳಿಯ ವಾಗಟ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಾಮರಸನಹಳ್ಳಿ ಗ್ರಾಮದಲ್ಲಿ 11 ಲಕ್ಷ ರೂ. ಮೊತ್ತದ ಶಾಲಾ ಕಟ್ಟಡ ಉದ್ಘಾಟನೆ ಮಾಡಿದರು.
ಚರಂಡಿ ಕಾಮಗಾರಿ, ಘನತ್ಯಾಜ್ಯ ವಿಲೇವಾರಿಗೆ ಒಣಕಸ ಸಂಗ್ರಹ ಬುಟ್ಟಿಯನ್ನು ಶಾಸಕ ಶರತ್ ಬಚ್ಚೇಗೌಡ ಭಾನುವಾರ ವಿತರಣೆ ಮಾಡಿದರು.
ನಂತರ ಸಪ್ಪಲಮ್ಮ ದೇವಾಲಯದ ಆವರಣವನ್ನು ಸ್ವಚ್ಚಗೊಳಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದು ಇದರ ನೇತೃತ್ವವನ್ನು ಪ್ರ‍್ರತಿಭಾ ಶರತ್ ಬಚ್ಚೇಗೌಡ ನೆರವೇರಿಸಿದರು.

ನೂತನ ದೇವಾಲಯ ಧಾನಿಗಳಿಂದ 50 ಲಕ್ಷಗಳು ಸಂಗ್ರಹವಾಗಿದ್ದು ಇನ್ನು ಭಕ್ತಾದಿಗಳು ತನು ಮನ ಧನ ಸಹಾಯ ಮಾಡುವಂತೆ ಗ್ರಾಮ ಪಂಚಾಯ್ತಿ ಸದಸ್ಯ ಅಭಿಮಾನಿ ಮುನಿರಾಜು ವಿನಂತಿಸಿದರು. ವಾಗಟ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ವಣಚನಹಳ್ಳಿಯ ರಾಮಮೂರ್ತಿ, ಗ್ರಾ.ಪಂ.ಸದಸ್ಯ ಶ್ರೀನಿವಾಸ್, ಬಿಇಓ ಕನ್ನಯ್ಯ, ಕೋಡಿಹಳ್ಳಿ ಸುರೇಶ್, ನಾರಾಯಣಗೌಡ, ಗ್ರಾಮಸ್ಥರುಗಳು ಹಾಜರಿದ್ದರು.

Related