ಕೊರೋನಾ ಭಯ ಬೇಡ ಎಚ್ಚರಿಕೆವಹಿಸಿ

ಕೊರೋನಾ ಭಯ ಬೇಡ ಎಚ್ಚರಿಕೆವಹಿಸಿ

ಮಧುಗಿರಿ-ಒಂದನೇ ಅಲೆ ಜನರನ್ನು ನಿದ್ದೆಗೆಡಿಸುವಂತೆ ಮಾಡಿತ್ತು. ಆದರೆ ಎರಡನೇ ಅಲೆ ಹಳ್ಳಿ ಹಳ್ಳಿಗೂ ವ್ಯಾಪಿಸಿರುವುದರಿಂದ ಅಕ್ಷರಶಃ ಅದರ ಪರಿಣಾಮ ಜನಸಾಮಾನ್ಯರನ್ನು ಬೆಚ್ಚಿ ಬೀಳಿಸುತ್ತಿದೆ. ದಿನದಿಂದ ದಿನಕ್ಕೆ ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿವೆ. ಜೊತೆಗೆ ಸಾವಿನ ಸಂಖ್ಯೆಯಲ್ಲೂ ಕಲ್ಪನೆ ಮೀರಿ ಸಂಭವಿಸುತ್ರಿರುವುದು ಜನತೆಯನ್ನು ಆತಂಕಕ್ಕೆ ದೂಡುವಂತೆ ಮಾಡಿದೆ ಎಂದು ಮಧುಗಿರಿ ಉಪವಿಭಾಗಾಧಿಕಾರಿ ಸೋಮಪ್ಪ ಕಡಕೊಳ ನುಡಿದರು.
ತಾಲ್ಲೂಕಿನಾದ್ಯಂತ ಕೊರೋನಾ ಸೋಂಕಿನ ಬಿಸಿ ತಟ್ಟಿ ಜನರು ಸಾವು ನೋವಿನ ನಡುವೆ ಸರ್ಕಾರಿ ಆಸ್ಪತ್ರೆಗೆ ಎಡತಾಕುತ್ತಿದ್ದಾರೆ. ರೋಗದ ಪರೀಕ್ಷೆಗೆಂದು ಬರುವ ರೋಗಿಗಳ ಸಂಖ್ಯೆಯಲ್ಲಿ ಗರಿಷ್ಠವಾಗಿ ಏರಿಕೆಯಾಗುತ್ತಿರುವುದರಿಂದ ತಾಲ್ಲೂಕು ಆಡಳಿತ ಎಚ್ಚೆತ್ತು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್ ಟೆಸ್ಟಿಂಗ್, ವ್ಯಾಕ್ಸಿನ್ ನೀಡಲಾಗುತ್ತಿತ್ತು. ಜನ ಹೆಚ್ಚಾದ ಹಿನ್ನೆಲೆ ಕಸ್ತೂರಿ ಬಾ ಗಾಂಧಿ ಬಾಲಿಕಾ ವಸತಿ ಶಾಲೆಯಲ್ಲಿ ಕೋವಿಡ್ ಲಸಿಕೆ (covid vaccine) ಮತ್ತು ಡಿ.ದೇವರಾಜು ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಕೋವಿಡ್ ಟೆಸ್ಟಿಂಗ್ (covid testing) ನಡೆಸಲಾಗುತ್ತಿದೆ. ಆಗಾಗಿ ಸಾರ್ವಜನಿಕರ ಕೊರೋನಾ ಸುರಕ್ಷತಾ ನಿಯಮಗಳನ್ನು ಪಾಲಿಸಿ ಸಹಕರಿಸಿ ಎಂದು ಮಧುಗಿರಿ ಉಪವಿಭಾಗಾಧಿಕಾರಿ ಸೋಮಪ್ಪ ಕಡಕೊಳ ತಿಳಿಸಿದರು. ಈ ಸಂದರ್ಭದಲ್ಲಿ ತಹಶೀಲ್ದಾರ್ ಕೆ.ಆರ್.ನಾಗರಾಜುರವರು ರಾಜಸ್ವ ನಿರೀಕ್ಷಕರು ರಾಜಗೋಪಾಲ್, ಗ್ರಾಮ ಲೆಖ್ಖಿಗರು ರಾಜೇಶ್, ಗೀರಿಶ್, ತಾಲೂಕು ವೈದ್ಯಾಧಿಕಾರಿ ತಿರುಪತಾಯ್ಯ. ಡಾಕ್ಟರ್ ಮಂಜುನಾಥ ಹಾಗೂ ಪೊಲೀಸ್ ಸಿಬ್ಬಂದಿ ಹಾಜರಿದ್ದರು

Related