ಜನಸಾಗರಕ್ಕೆ ಕೈಬೀಸಿ ಹುರಿದುಂಬಿಸಿದ ಡಿ.ಕೆ.ಶಿ ಮತ್ತು ಸಿದ್ದರಾಮಯ್ಯ

  • In State
  • August 17, 2021
  • 521 Views
ಜನಸಾಗರಕ್ಕೆ ಕೈಬೀಸಿ ಹುರಿದುಂಬಿಸಿದ ಡಿ.ಕೆ.ಶಿ ಮತ್ತು ಸಿದ್ದರಾಮಯ್ಯ

ರಾಯಚೂರು : ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷರಾದ ಡಿಕೆ ಶಿವಕುಮಾರ್, ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಮಂಗಳವಾರ ರಾಯಚೂರಿನಲ್ಲಿ ನಡೆದ ಕಲ್ಯಾಣ ಕರ್ನಾಟಕ ಕಾಂಗ್ರೆಸ್ ಪಕ್ಷದ ಪ್ರಮುಖ ಸಭೆಯಲ್ಲಿ ಭಾಗಿಯಾಗಿದ್ದರು.
ಈ ವೇಳೆ ಜನಸಾಗರ ಹರಿದುಬಂದು ಡಿಕೆ ಶಿವಕುಮಾರ್, ಸಿದ್ದರಾಮಯ್ಯ ರವರಿಗೆ ಹೂವನ್ನು ಎರಚುವ ಮೂಲಕ ದೊಡ್ಡಮಟ್ಟದ ಹೂವಿನ ಮಾಲೆ ಹಾಕುವುದರೊಂದಿಗೆ ಸಂಭ್ರಮದಿಂದ ಅದ್ದೂರಿಯಾಗಿ ಸ್ವಾಗತಿಸಿದ್ದಾರೆ.

ಜಿಲ್ಲಾಧ್ಯಕ್ಷರಾದ ಬಿ.ವಿ ನಾಯಕ, ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಹರ್ಷೋದ್ಘಾರವಾಗಿ ಸ್ವಾಗತ ನೀಡಿದ ಜನಸಾಗರಕ್ಕೆ ಕೈಬೀಸಿ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಹುರಿದುಂಬಿಸಿದರು. ನಂತರ ಕಲ್ಯಾಣಿ ಕರ್ನಾಟಕದ ಕಾಂಗ್ರೆಸ್ ಪಕ್ಷದ ಮುಖಂಡರು ವಿಶೇಷ ಸಭೆಗೆ ತೆರಳಿದರು.

Related