ಮೋದಿ ಚಿಕ್ಕಬಳ್ಳಾಪುರ ಮತದಾರಿಗೆ ಭರವಸೆ ನೀಡಿದ್ದೇನು?

ಮೋದಿ ಚಿಕ್ಕಬಳ್ಳಾಪುರ ಮತದಾರಿಗೆ ಭರವಸೆ ನೀಡಿದ್ದೇನು?

ಚಿಕ್ಕಬಳ್ಳಾಪುರ: ಪ್ರಧಾನಿ ನರೇಂದ್ರ ಮೋದಿಯವರು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಡಾ, ಸುಧಾಕರವರ ಪರವಾಗಿ ಭರ್ಜರಿ ಮತ ಬೇಟೆ ಮಾಡಿದ್ದು, ನಮ್ಮ ಸರ್ಕಾರದ ಗ್ಯಾರಂಟಿಗಳನ್ನು ನಂಬಿ, 3ಕೋಟಿ ಮನೆಗಳನ್ನು ಕಟ್ಟಿಸಿ ಕೊಡುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಚಿಕ್ಕಬಳ್ಳಾಪುರ ಮತದಾರರಿಗೆ ಹೇಳಿದ್ದಾರೆ.

ಇಂದು ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, ದೇಶದಲ್ಲಿರುವ ಎಲ್ಲಾ70 ವರ್ಷಕ್ಕೂ ಮೇಲ್ಪಟ್ಟವರಿಗೆ 5 ಲಕ್ಷದವರೆಗೆ ಉಚಿತ ಚಿಕಿತ್ಸೆ ಒದಗಿಸುವುದಾಗಿ ಎಂದು ತಮ್ಮ ಪಕ್ಷದ ಪ್ರಣಾಳಿಕೆಯನ್ನು ಪುನರುಚ್ಚರಿಸಿದರು. ಮೋದಿ ಸರ್ಕಾರದ ದೊಡ್ಡ ಫಲಾನುಭವಿಗಳೆಂದರೆ ಎಸ್​ಸಿ-ಎಸ್​ಟಿ ಸಮುದಾಯದವರು ಎಂದು ಹೇಳಿದರು. 3 ಕೋಟಿ ಮನೆಗಳನ್ನು ನಿರ್ಮಿಸಲಾಗುವುದು ಎಂದು ಮೋದಿ ಭರವಸೆ ನೀಡಿದರು.

ಚಿಕ್ಕಬಳ್ಳಾಪುರದ ಸಹೋದರ-ಸಹೋದರಿಯರಿಗೆ ನಮಸ್ಕಾರಗಳು ಎಂದು ಭಾಷಣ ಆರಂಭಿಸಿದ ಮೋದಿ, ಐತಿಹಾಸಿಕ ಕೈವಾರ ತಾತಯ್ಯ ಅವರನ್ನು ನೆನೆದರು. ಈ ವಯಸ್ಸಿನಲ್ಲೂ ಉತ್ಸಾಹ ತೋರುವ ದೇವೇಗೌಡರಿಗೆ ಗೌರವ ಸಲ್ಲಿಸುತ್ತೇನೆ. ಅವರ ಮಾತುಗಳನ್ನ ಕೇಳಿ ನಮಗೆ ಮತ್ತಷ್ಟು ಉತ್ಸಾಹ ಬಂದಿದೆ. ಹೆಚ್‌ಡಿಡಿ ಯುಪಿಎ ಹಗರಣಗಳ‌ ಬಗ್ಗೆ ಸವಿಸ್ತಾರವಾಗಿ ಹೇಳಿದ್ದಾರೆ ಎಂದರು.

 

Related