ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ

ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ

ಬಾಗಲಕೋಟೆ : ಜಿಲ್ಲೆಯ ಹುನಗುಂದ ತಾಲ್ಲೂಕಿನ ಅಮೀನಗಡ ಪೋಲಿಸರು ಅಂತರ ಜಿಲ್ಲಾ ಬೈಕ್ ಕಳ್ಳತನ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತನಿಂದ ಮೂರು ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಸೆ. 27 ರಂದು ಅಮೀನಗಡ ಬಸ್ಸು ನಿಲ್ದಾಣದ ಮುಂಭಾಗದಲ್ಲಿ ನಿಲ್ಲಿಸಿದ್ದ ಗುಡೂರು ಗ್ರಾಮದ ಸುಭಾಷ್ ಲಯದಗುಂದಿ ಎನ್ನುವವರು ತಮ್ಮ ಬೈಕ್‌ನ್ನು ನಿಲ್ಲಿಸಿ ತಮ್ಮ ಕೆಲಸಕ್ಕೆಂದು ಬೇರೆ ಕಡೆ ಹೋಗಿ ಮತ್ತೆ ಬಂದು ನೋಡಿದರೆ ಬೈಕ್ ಕಳ್ಳತನವಾಗಿದೆ ಎಂದು ಮೀನಗಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ದೂರನ್ನು ಸ್ವೀಕರಿಸಿಕೊಂಡು ಪ್ರಕರಣವನ್ನು ಬೆನ್ನತ್ತಿದ ಪೊಲೀಸರು ಎಸ್.ಪಿ ಲೋಕೇಶ್ ಜಗಲಾಸರ, ಡಿ.ಎಸ್‌ಪಿ ಚಂದ್ರಕಾAತ್ ನಂದರೆಡ್ಡಿ, ಹುನಗುಂದ ಸಿಪಿಐ ಹೊಸಕೇರಪ್ಪ ಕೋಳೂರ ಅವರ ಮಾರ್ಗದರ್ಶನದಲ್ಲಿ ಕಳ್ಳತನ ಮಾಡಿದ್ದ ವ್ಯಕ್ತಿಯನ್ನು ಬಂಧಿಸುವಲ್ಲಿ ಅಮೀನಗಡ ಪಿಎಸ್‌ಐ ಎಮ್‌ಜಿ ಕುಲಕರ್ಣಿ ಅವರ ನೇತೃತ್ವದಲ್ಲಿ ತಂಡ ಯಶಸ್ವಿಯಾಗಿದೆ.

ಆರೋಪಿ ಗಂಗೂರು ಗ್ರಾಮದ ಹಣಮಗೌಡ ರಾಮನಗೌಡ ಪಾಟೀಲವೆಂದು ತಿಳಿದು ಬಂದಿದೆ. ಆರೋಪಿಯಿಂದ ಅಂದಾಜು ಒಂದು ಲಕ್ಷ ಮೌಲ್ಯದ ಮೂರು ಬೈಕ್‌ಗಳು ವಶಪಡಿಸಿಕೊಳ್ಳಲಾಗಿದೆ.

ಈ ಕಾರ್ಯಕ್ಕೆ ಬಾಗಲಕೋಟ ಎಸ್‌ಪಿ ಲೋಕೇಶ್ ಜಗಲಾಸರ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಪ್ರೊ ಪಿಎಸ್‌ಐ ಯತೀಶ್, ಎಎಸ್‌ಐ. ಎಂಯಲ್ ಭಜಂತ್ರಿ, ಎಎಸ್‌ಐ ಎ ವೈ ಪಾಟೀಲ, ಎಎನ್ ಶಿರಹಟ್ಟಿ, ಎಮ್ ಆರ್ ಹೊನ್ನನಾಯಕನವರ, ಎಎಚ್ ಮುಲ್ಲಾ, ಆರ್‌ಆರ್ ದಾಸರ, ಮಾಂತೇಶ ಬೋಳರೆಡ್ಡಿ, ಮಹೇಶ್ ಕುದರಿ ಇನ್ನಿತರರಿದ್ದರು.

Related