ಅಕ್ರಮ ಕಳ್ಳಬಟ್ಟಿ ಮಾರುತ್ತಿದ್ದವನ ಬಂಧನ

ಅಕ್ರಮ ಕಳ್ಳಬಟ್ಟಿ ಮಾರುತ್ತಿದ್ದವನ ಬಂಧನ

 ಔರಾದ್   : ತಾಲೂಕಿನ  ಎಕಂಬಾ ತಾಂಡಾದಲ್ಲಿ ಗುರುವಾರ ನಡೆದ ಪೊಲೀಸ್ ದಾಳಿಯಿಂದ ಅಕ್ರಮ ಕಳ್ಳಬಟ್ಟಿ ಮಾರುತ್ತಿದ್ದ ಅರುಣ ರಾಠೋಡ್ ಎಂಬಾತನನ್ನು ಬಂಧಿಸಲಾಗಿದೆ ಎಂದು ಪಿಎಸ್‌ಐ ಮಂಜನಗೌಡ ಪಾಟೀಲ್ ತಿಳಿಸಿದ್ದಾರೆ.
ಸುಮಾರು 16 ಲೀಟರ್ ಕಳ್ಳಬಟ್ಟಿ ಸಾರಾಯಿ ಜಪ್ತಿ ಮಾಡಿರುವುದಾಗಿ ಮಾಹಿತಿ ನೀಡಿದ್ದಾರೆ.

ಈ ಸಂದರ್ಭದಲ್ಲಿ ಔರಾದ್ ಪೊಲೀಸ್ ಠಾಣಾ ಸಿಬ್ಬಂದಿ ನರಸಾರೆಡ್ಡಿ, ಅಜಯಸಿಂಗ್, ಕೊಟ್ರೇಶ, ಹರೀಶ, ಉಮರ ಪಟೇಲ್ ಹಾಗೂ ಗ್ರಾಮ ಲೆಕ್ಕಾಧಿಕಾರಿ ಸುನೀಲ್ ಮತ್ತು ಮೇಘನಾ ಉಪಸ್ಥಿತರಿದ್ದರು.

Related