ಸಿಆರ್ ಪಿಎಫ್ ಯೋಧನ ಹಲ್ಲೆ ಪ್ರಕರಣ: ಪಿಎಸ್ಐ ಅನೀಲ ಕಂಬಾರ್ ಅಮಾನತು

ಸಿಆರ್ ಪಿಎಫ್ ಯೋಧನ ಹಲ್ಲೆ ಪ್ರಕರಣ: ಪಿಎಸ್ಐ ಅನೀಲ ಕಂಬಾರ್ ಅಮಾನತು

ಚಿಕ್ಕೋಡಿ: ರಾಜ್ಯವ್ಯಾಪ್ತಿ ಸ್ಟೋಟಕ ತಿರುವು ಪಡೆದುಕೊಂಡಿದ್ದ ಸಿಆರ್ ಪಿಎಫ್ ಯೋಧನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸದಗಲಾ ಠಾಣೆಯ ಪಿಎಸ್ಐ ಅನೀಲ ಕಂಬಾರ್ ಅವರನ್ನು ಅಮಾನತುಗೊಳಿಸಲಾಗಿದೆ  ಎಂದು ಮಾಹಿತಿ ಲಭ್ಯವಾಗಿದೆ.

ಸಿಆರ್ ಪಿಎಫ್ ಯೋಧ ಸಚಿನ್ ಸಾವಂತ ಮಾಸ್ಕ್ ಧರಿಸಿರಲಿಲ್ಲ ಠಾಣಾ ಸಿಬ್ಬಂದಿ ಕರೆತಂದು ರಾತ್ರಿಯಿಡಿ ಊಟ ಹಾಗೂ ಚಡಿ ಏಟು ನೀಡಲಾಗಿದೆ. ಈ ಇಡೀ ರಾತ್ರಿ ಠಾಣೆಯಲ್ಲಿ ಹಿಂಸಿಸಲಾಗಿದೆ ಎಂದು ಆರೋಪಿಸಲಾಗಿತ್ತು. ಯೋಧನ ಮೈಮೇಲೆ ಬಾಸುಂಡೆ ಏಳುವಂತೆ ಹೊಡೆದಿರುವ ಫೋಟೋಗಳು ಕೂಡ ವೈರಲ್ ಆಗಿವೆ.

ಈ ಪ್ರಕರಣದ ತನಿಖೆಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಆದೇಶಿಸಿದ್ದರು. ಬೆಳಗಾವಿ ಐಜಿಯಿಂದ ತನಿಖೆಗೆ ಆದೇಶಿಸಲಾಗಿದೆ. ತನಿಖೆ ಮುಂದುವರಿದಿದ್ದು, ಪಿಎಸ್ಐ ಅನಿಲ ಕಂಬಾರ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ.

ಈ ನಡುವೆ ಖ್ಯಾತ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಅವರು ಯೋಧನ ಮೇಲೆ ನಡೆದ ಪೊಲೀಸರ ದೌರ್ಜನ್ಯ ಖಂಡಿಸಿದ್ದು, ಈ ಪ್ರಕರಣ ಸಂಬಂಧ ಗೃಹಮಂತ್ರಿ ರಾಜೀನಾಮೆ ಪಡೆದು, ಎಸ್ಪಿಯನ್ನು ಸಸ್ಪೆಂಡ್ ಮಾಡಿ ಎಂದು ಮುಖ್ಯಮಂತ್ರಿಗೆ ಟ್ವೀಟ್ ಮಾಡಿದ್ದಾರೆ.

Related