ಕೊಪ್ಪಳ: ಕೆ ವೈ ಸಿ ಮಾಡಿಸಿದರೆ ಮನೆಬಳಕೆಯ ಗ್ಯಾಸ್ ಸಿಲೆಂಡರ್ ಗೆ 500 ಸಿಗುತ್ತದೆ ಎಂದು ಈಗಾಗಲೇ ಸುಳ್ಳು ವದಂತಿಗಳು ರಾಜದಾದ್ಯಂತ ಹರಿದಾಡುತ್ತಿದ್ದು, ರಾಜ್ಯದ ಮಹಿಳೆಯರು ಗ್ಯಾಸ್ ಏಜೆನ್ಸಿ ಗಳ ಮುಂದೆ ಕೆ ವೈ ಸಿ ಮಾಡಲು ಮುಗಿಬಿದ್ದಿದ್ದಾರೆ.
ಉಜ್ವಲ ಯೋಜನೆಯ ಗ್ಯಾಸ್ ಸಿಲಿಂಡರ್ ಕೆ ವೈ ಸಿ ಮಾಡಿಸಿದರೆ ರೂ.300 ಇಂದ 400 ಪ್ರತಿಕ್ಯಾಸ್ ಮೇಲೆ ಸಬ್ಸಿಡಿ ಸಿಗುತ್ತದೆ ಎಂದು ಸುದ್ದಿಗಳು ಹರದಾಡುತ್ತಿರುವುದರಿಂದ ಗ್ಯಾಸ್ ಏಜೆನ್ಸಿಯ ಮುಂದೆ ಮಹಿಳೆಯರು ಸಾಲುಗಟ್ಟೆ ನಿಂತು ಕೆವೈಸಿ ಮಾಡಿಸುತ್ತಿದ್ದಾರೆ.
ಬೀದರು, ಹಾಸನ, ಧಾರವಾಡ ಕೊಪ್ಪಳ ಸೇರಿದಂತೆ ಇನ್ನು ರಾಜ್ಯದ ಇತರ ಜಿಲ್ಲೆಗಳಲ್ಲಿ ವದಂತಿ ಹರಿದಾಡುತ್ತಿದೆ.
ಇನ್ನು ಕೆವೈಸಿ ಮಾಡಲು ಮಹಿಳೆಯರು ಸೇರಿದಂತೆ ಪುರುಷರು ಸಹ ಸರತಿ ಸಾಲಿನಲ್ಲಿ ನಿಂತು ಕೆವೈಸಿ ಮಾಡಿಸಲು ಹರಸಾಹಸ ಪಡುತ್ತಿದ್ದಾರೆ.
ಈ ಸುಳ್ಳು ಸುದ್ದಿಯನ್ನು ನಂಬಿರುವ ಮಹಿಳೆಯರು ಎಲ್ಲಾ ತಮ್ಮ ದಾಖಲೆಗಳನ್ನು ಹಿಡಿದುಕೊಂಡು ಕೆವೈಸಿ ಮಾಡಿಸಲು ಮುಗಿಬಿದ್ದಿದ್ದಾರೆ. ಈ ಕೆವೈಸಿ ಮಾಡಿಸಲು ಕೊಪ್ಪಳ ಜಿಲ್ಲೆಯಲ್ಲಿ ಮಹಿಳೆಯರು ಮತ್ತು ಪುರುಷರು ಸರತಿ ಸಾಲಿನಲ್ಲಿ ಕೆವೈಸಿ ಮಾಡಿಸಿ ತ್ತಿರುವುದು ಕಂಡುಬಂದಿದೆ.