ಬೆಂಗಳೂರು, ಏ.20 : ರಾಜ್ಯದಲ್ಲಿ ಕೊರೊನಾ ಪೀಡಿತರ ಸಂಖ್ಯೆ ಇಳಿಮುಖ ಕಾಣುವ ಲಕ್ಷಣಗಳು ಗೋಚರಿಸುತ್ತಿದ್ದು , ಕಳೆದ 20 ಗಂಟೆಗಳಲ್ಲಿ ಕೇವಲ 5 ಪ್ರಕರಣಗಳು ಮಾತ್ರ ದಾಖಲಾಗಿದ್ದು, ಅವೆಲ್ಲವೂ ಗುಲ್ಬರ್ಗದ ನಿವಾಸಿಗರೇ ಆಗಿರುವುದು ವಿಶೇಷವಾಗಿದೆ.
ದೆಹಲಿಯ ಜಮಾತ್ ಸೇರಿದಂತೆ ಅಲ್ಲಿಗೆ ತೆರಳಿದ್ದ ಈ ಐವರಿಗೂ ಈ ಸೋಂಕು ತಗುಲಿದೆ. ಮೂಲಗಳ ಪ್ರಕಾರ ಕೆಲವರು ಅವರ ಸಂಪರ್ಕಕ್ಕೆ ಬಂದು ಕೊರೊನಾ ಸೋಂಕಿಗೆ ಸಿಲುಕಿದ್ದಾರೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.