ಗಜೇಂದ್ರಗಡ : ಇಡೀ ಜಗತ್ತಿನಲ್ಲಿ ತಾಂಡವ ನೃತ್ಯವನ್ನು ಆಡುತ್ತಿರುವ ಕೊರೋನಾ ವಿರುದ್ಧ ನಾವೆಲ್ಲರೂ ಹೋರಾಟ ಮಾಡಬೇಕು ಎಂದು ಜ್ಯೂ ವಿಷ್ಣು ದಾದಾ, ಅಭಿಮಾನಿಗಳು ಹೇಳಿದರು.
ಪಟ್ಟಣದ ವಿಷ್ಣುವರ್ಧನ ವೃತ್ತದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ನಾನು ಇಡೀ ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಕೊರೋನಾ ಜಾಗೃತಿ ಹಾಗೂ ಸಂಚಾರ ನಿಯಮ ಪಾಲಿಸುವಂತೆ ಜನತೆಗೆ ಅರಿವು ಮೂಡಿಸುವ ಪ್ರಯತ್ನ ಮಾಡುತ್ತೇನೆ ಎಂದು ನುಡಿದರು.
ಕರ್ನಾಟಕ ಅಭಿವೃದ್ಧಿ ವೇದಿಕೆಯ ರಾಜ್ಯಾಧ್ಯಕ್ಷ ವಿನಾಯಕ ಜರತಾರಿ ಮಾತನಾಡಿ ಡಾ. ವಿಷ್ಣುವರ್ಧನ, ಅಭಿಮಾನಿಗಳು ಸಾರ್ವಜನಿಕರಿಗೆ ಯಾವೂದೇ ಜಾಗೃತಿ ಮೂಡಿಸುವ ಕಾರ್ಯ ಮಾಡಲು ಮೊದಲಿನ ಸಾಲಿನಲ್ಲಿ ಅವರ ಹೆಸರುಗಳನ್ನು ಕೇಳುತ್ತೇನೆ ಈಗಲಾದರೂ ಜನರು ಎಚ್ಚೆತ್ತುಕೊಳ್ಳಬೇಕು ಎಂದು ಹೇಳಿದರು.
ಸಮಾರಂಭದಲ್ಲಿ ಪರಶುರಾಮ ಹಾಳಕೇರಿ, ನಿರ್ಮಾಪಕ ಜಿಲ್ಲಾಜಿ ಖಾಜಿ , ಮುದ್ದು ಕಂದಗಲ, ರಾಘು ಕೆ.ಪರಶು ಬಡಿಗೇರ ಸೇರಿದಂತೆ ಮತ್ತಿತ್ತರರು ಇದ್ದರು.