ಕಾಂಗ್ರೆಸ್ ಪಕ್ಷದವರಿಗೆ ಹಿಂದೂ ಜನರು ಏನೆಂದು ತೋರಿಸುತ್ತಾರೆ: ಸತೀಶ್ ರೆಡ್ಡಿ

ಕಾಂಗ್ರೆಸ್ ಪಕ್ಷದವರಿಗೆ ಹಿಂದೂ ಜನರು ಏನೆಂದು ತೋರಿಸುತ್ತಾರೆ: ಸತೀಶ್ ರೆಡ್ಡಿ

ಬೆಂಗಳೂರು: ಕೇಜೆ ಹಳ್ಳಿ ಡಿಜೆ ಹಳ್ಳಿ ಎಲ್ಲಿ ಗಲಾಟೆಯಾದ ಸಂದರ್ಭದಲ್ಲಿಯೇ ಡಿಕೆ ಶಿವಕುಮಾರ್ ಅವರು ಪೊಲೀಸ್ ಕಮಿಷನರಿಗೆ ಏನೆಂದು  ರೊಪ್ ಹಾಕಿದ್ದಾರೆ ಎಂದು ಈಗಾಗಲೇ ನಿಮಗೆ ತಿಳಿದಿರುವ ವಿಷಯ.

ನಮ್ಮ ರಾಜ್ಯದ ಜನರು ಎಲ್ಲಾನಾಯಕರನ್ನು ನೋಡುತ್ತಾ ಬಂದಿದ್ದಾರೆ, ಯಾರು ಯಾರು ಎಂತಹ ನಾಯಕರು ಎಂದು ಅವರಿಗೆ ಗೊತ್ತಿದೆ. ಕಾಂಗ್ರೆಸ್ ಪಕ್ಷದವರು ಹಿಂದಿನಿಂದಲೂ ಪೊಲೀಸ್ನವರಿಗೆ ಧಮಕಿ ಹಾಕುತ್ತಲೇ ಬಂದಿದ್ದಾರೆ ಎಂದು ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಎನ್ ಸತೀಶ್ ರೆಡ್ಡಿ ಅವರು ಹೇಳಿದರು..

ಅವರು ಇಂದು ಬೊಮ್ಮನಹಳ್ಳಿಯಲ್ಲಿ ಮತಯಾಚನೆ ಮಾಡುವ ಸಂದರ್ಭದಲ್ಲಿ ಮಾತನಾಡಿ, ಇತ್ತೀಚಿಗೆ ಡಿಕೆ ಶಿವಕುಮಾರ್ ಅವರು ಮಾತನಾಡಿದ್ದನ್ನು ನಾನು ನೋಡಿದ್ದೇನೆ. ಮುಸ್ಲಿಂ ಬ್ರದರ್ಸ್ ಅಂತ ಹೇಳುತ್ತಿದ್ದರು. ಹಾಗಾದರೆ ಹಿಂದುಗಳು ಯಾರು ನಿಮಗೆ ಬ್ರದರ್ಸ್ ಇಲ್ವಾ ಎಂದು ಪ್ರಶ್ನಿಸಿದರು.

ನಾವು ಹೇಳುತ್ತೇವೆ ಹಿಂದೂ ಮುಸ್ಲಿಂ ಕ್ರಿಶ್ಚಿಯನ್ಸ್ ಎಲ್ಲರೂ ನಮ್ಮ ಬಂಧು ಮಿತ್ರರೇ ಎಂದು ಹೇಳುತ್ತೇವೆ. ಕಾಂಗ್ರೆಸ್ನವರು ಮತಕ್ಕಾಗಿ ಕೇವಲ ಒಂದೇ ಜಾತಿಯವರ ಪರವಾಗಿ ಮಾತನಾಡುತ್ತಾರೆ ಎಂದು ಗುಡುಗಿದರು.

ಬಿ ಎಫ್ ಐ, ಕೆ ಎಫ್ಡಿ ಅಂತಹ ಉಗ್ರಗಾಮಿ ಸಂಘಟನೆಗಳನ್ನು ಇಂದು ಬಿಜೆಪಿ ಬ್ಯಾನ್ ಮಾಡಿದೆ. ನೀವು ದೇಶಭಕ್ತರಾಗಿರುವಂತಹ ಆರ್ ಎಸ್ ಎಸ್, ಬಜರಂಗದಳವನ್ನು ಬ್ಯಾನ್ ಮಾಡಲು ಹೊರಟಿದ್ದೀರಾ? ಚುನಾವಣೆಯಲ್ಲಿ ಜನರು ನಿಮಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಹೇಳಿದರು.

ಹಿಂದುಗಳಿಗೂ ಹಾಗೂ ಆಂಜನೇಯನಿಗೆ ಏನು ಸಂಬಂಧ ಎಂದು ಕೇಳುತ್ತೀರಾ? ಶ್ರೀ ರಾಮನ ದೇವಸ್ಥಾನವನ್ನು ಕಟ್ಟುವಂತಹ ಆಂಜನೇಯ ಭಕ್ತರಿಗೆ ಹಿಂದುಗಳಿಗೆ ಏನು ಸಂಬಂಧ ಎಂದು ನೀವು ಪ್ರಶ್ನಿಸುತ್ತೀರಾ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದವರಿಗೆ ಹಿಂದೂ ಜನರು ಏನೆಂದು ತೋರಿಸುತ್ತಾರೆ. ಕಾಂಗ್ರೆಸ್ನವರು ಯಾವ ಧರ್ಮದ ಬಗ್ಗೆಯೂ ಮಾತನಾಡುವ ಅಧಿಕಾರವಿಲ್ಲವೆಂದು ಈ ಸಂದರ್ಭದಲ್ಲಿ ತಿಳಿಸಿದರು.

Related