ಪರಿಷತ್ ಸ್ಥಾನಕ್ಕೆ ಕಾಂಗ್ರೆಸ್ ಒತ್ತಾಯ

ಪರಿಷತ್ ಸ್ಥಾನಕ್ಕೆ ಕಾಂಗ್ರೆಸ್ ಒತ್ತಾಯ

ಹೊಸಕೋಟೆ : ತಾಲ್ಲೂಕಿಗೆ ಇದೇ 19 ರಂದು ನಡೆಯುವ ವಿಧಾನ ಪರಿಷತ್ ಚುನಾವಣೆಗೆ ಹೊಸಕೋಟೆ ತಾಲ್ಲೂಕಿಗೆ ಒಂದು ಸ್ಥಾನ ನೀಡುವಂತೆ ಬ್ಲಾಕ್ ಕಾಂಗ್ರೆಸ್ ಮಿತಿಗಳು ಒತ್ತಾಯಿಸಿದೆ.

ವಿಧಾನ ಪರಿಷತ್ ನಿಂದ ಬರುವ ಅನುದಾನಗಳನ್ನು ಬಳಸಿಕೊಂಡು ತಾಲೂಕು ಅಭಿವೃದ್ಧಿ ಮಾಡಿ ಪಕ್ಷ ಬಲವರ್ಧನೆ ಮಾಡಲು ಸಹಾಯ ಆಗುತ್ತದೆ ಕಳೆದ ಉಪ ಚುನಾವಣೆಯಲ್ಲಿ ಪದ್ಮಾವತಿ ಸುರೇಶ್ 42 ಸಾವಿರ ಮತವನ್ನು ಕಷ್ಟಕಾಲದಲ್ಲಿ ಪಡೆದಿದ್ದಾರೆ ಎಂದು ಹೇಮಂತ್ ಕುಮಾರ್ ಹೇಳಿದರು.

ಇದು ಹೊಸಕೋಟೆ ಪಟ್ಟಣದ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಟಿ. ಹೇಮಂತ್ ಕುಮಾರ್ ಮಾತನಾಡಿ ನಮ್ಮ ತಾಲ್ಲೂಕಿನ ಕೆಪಿಸಿಸಿ ಸದಸ್ಯಯರಾದ  ವಿ.ಪ್ರಸಾದ್,ವಿ. ನಾರಾಯಣಸ್ವಾಮಿ, ಶಿವಕುಮಾರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮುನಿಶಾಮಣ್ಣ, ಎಂಟಿಬಿ ನಾಗರಾಜ್ ಅಣ್ಣನವರಾದ ಪಿಳ್ಳಪ್ಪ, ಹಿಂದುಳಿದ ರಾಜ್ಯ ಪ್ರಧಾನ ಕಾರ್ಯದರ್ಶಿ ತ. ವೆಂಕಟೇಶ್, ನಾಣಿ,ಬ್ಲಾಕ್ ಕಾಂಗ್ರೆಸ್ ಅಧಯಕ್ಷರುಗಳಾದ ಎನ್.ಟಿ ಇಷ್ಟು ಜನರಲ್ಲಿ ಯಾರಿಗೂ ಕೊಟ್ಟರು ನಾವು ಒಗ್ಗಟ್ಟಿನಿಂದ ದುಡಿದು ಮುಂದೆ ಪಕ್ಷವನ್ನು ಗೆಲ್ಲಿಸುತ್ತವೆ.

ಬ್ಲಾಕ್ ಅಧ್ಯಕ್ಷ ಸಗೀರ್ ಮಾತನಾಡಿ ಈಗ ಪ್ರಸ್ತು ನಡೆಯುವ ವಿಧಾನ ಪರಿಷತ್ ಚುನಾವೆಣೆಯಲ್ಲಿ ಎರಡು ಸ್ಥಾನಗಳಿದ್ದು ಅದಲ್ಲಿ ಒಂದು ಸ್ಥಾನವನ್ನು ನಮ್ಮಲ್ಲಿ ಯಾರಿಗಾದ್ರು ಒಂದು ಸ್ಥಾನ ನೀಡಬೇಕು ಹಿಂದಿನ ಕಾಂಗ್ರೆಸ್ ಭದ್ರಕೋಟೆ ಎಂಬುದನ್ನು ಕಟ್ಟಲು ನಮಗೆ ಅನುಕೂಲವಾಗುತ್ತದೆ ಎಂದು ಹೇಳಿದರು.

Related