ಅನುಗ್ರಹ ಬಡಾವಣೆಗೆ ಭೇಟಿ ನೀಡಿದ ಆಯುಕ್ತರು

ಅನುಗ್ರಹ ಬಡಾವಣೆಗೆ ಭೇಟಿ ನೀಡಿದ ಆಯುಕ್ತರು

ಬೆಂಗಳೂರು: ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಕೊಡಿ ಚಿಕ್ಕನಹಳ್ಳಿಯ ಅನುಗ್ರಹ ಬಡಾವಣೆಯ  ಭಾಗದಲ್ಲಿನ ರಾಜಕಾಲುವೆ ಕಾಮಗಾರಿಯು ಸ್ಥಗಿತಗೊಂಡಿದ್ದು,ನೆನ್ನೆ ಸುರಿದ ಧಾರಾಕಾರ ಮಳೆಯಿಂದ ಬಡಾವಣೆಯ ಸುತ್ತಮುತ್ತಲಿನ ಮನೆಗಳಿಗೆ ಕೊಳಚೆ ಹಾಗೂ ಸ್ಯಾನಿಟರಿ ನೀರು ನುಗ್ಗಿ ಅಪಾರ ಪ್ರಮಾಣದ ಹಾನಿ ಉಂಟಾಗಿರುತ್ತದೆ ಹಾಗೂ ಸ್ಥಳೀಯ ನಿವಾಸಿಗಳೊಂದಿಗೆ ಅವರ ಕುಂದುಕೊರತೆಗಳನ್ನು ಆಲಿಸಿದರು.

ರಾಜಕಾಲುವೆಯ ಬಳಿ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಹೂಳು ಎತ್ತಲು ಹಾಗೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದೆ.

ಈ ಸಂದರ್ಭದಲ್ಲಿ ಬಿಬಿಎಂಪಿ ಆಯುಕ್ತರಾದ ತುಷಾರ್ ಗಿರಿನಾಥ್, ವಿಶೇಷ ಆಯುಕ್ತರಾದ ಹರೀಶ್ ಕುಮಾರ್, ಮುಖ್ಯ ಅಭಿಯಂತರುಗಳಾದ ಶಶಿಕುಮಾರ್, ಬೊಮ್ಮನಹಳ್ಳಿ ಬೊಮ್ಮನಹಳ್ಳಿ ವಲಯ ಜಂಟಿ ಆಯುಕ್ತರಾದ ಕೃಷ್ಣಮೂರ್ತಿ, ಬಿಬಿಎಂಪಿ ಅಧಿಕಾರಿಗಳು, SWD ಅಧಿಕಾರಿಗಳು ಹಾಗೂ BWSSB ಅಧಿಕಾರಿಗಳು ಮತ್ತು ಸ್ಥಳೀಯ ಮುಖಂಡರುಗಳು, ಬಡಾವಣೆಯ ನಿವಾಸಿಗಳು ಪಾಲ್ಗೊಂಡಿದ್ದರು.

Related