ಸಿಎಂ ಜನಪ್ರಿಯತೆ ದೇಶದೆಲ್ಲೆಡೆ ಹೆಚ್ಚುತ್ತಿದೆ: ಸಂತೋಷ್ ಲಾಡ್

ಸಿಎಂ ಜನಪ್ರಿಯತೆ ದೇಶದೆಲ್ಲೆಡೆ ಹೆಚ್ಚುತ್ತಿದೆ: ಸಂತೋಷ್ ಲಾಡ್

ಧಾರವಾಡ: ರಾಜ್ಯದಲ್ಲಿ 2023ನೇ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಬಹುಮತದಿಂದ ಗೆದ್ದು ತನ್ನ ಅಧಿಕಾರದ ಬುದ್ದಿಯನ್ನು ಹಿಡಿದಿದೆ.

ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯ ಕ್ಕೆ ಮಾತ್ರವಲ್ಲದೆ ದೇಶದೆಲ್ಲೆಡೆ ಅವರು ಅಚ್ಚುಮೆಚ್ಚಿನ ಮಂತ್ರಿಯಾಗಿದ್ದಾರೆ ಎಂದು ಉಸ್ತುವಾರಿ ಸಚಿವ ಸಂತೋಷ್ ಲಾಡ್ ಅವರು ಮುಖ್ಯಮಂತ್ರಿ ಅವರನ್ನು ಹಾಡಿ ಹೊಗಳಿದ್ದಾರೆ.

ಹೌದು, ಧಾರವಾಡ ಜಿಲ್ಲೆಯ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಗ್ಗೆ ಭಾರೀ ಮೆಚ್ಚುಗೆಯ ಮಾತಾಡಿದರು. ಧಾರವಾಡದಲ್ಲಿಂದು ಸುದ್ದಿಗಾರರೊಂದಿಗೆ ಮಾತಾಡಿದ ಸಚಿವರು, ಸಿದ್ದರಾಮಯ್ಯನವರ ಜನಪ್ರಿಯತೆ ದೇಶದೆಲ್ಲೆಡೆ ಹಬ್ಬಿದೆ, ಅವರು ದೇಶದ ಅತ್ಯುತ್ತಮ ಮುಖ್ಯಮಂತ್ರಿ ಎನಿಸಿಕೊಂಡಿದ್ದಾರೆ ಎಂದು ಲಾಡ್ ಹೇಳಿದರು.

ಮಹಾರಾಷ್ಟ್ರದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಸಿದ್ದರಾಮಯ್ಯ ಮಾಡಿದ ಭಾಷಣಕ್ಕೆ ದೀರ್ಘ ಕರತಾಡನ ವ್ಯಕ್ತವಾದ ಬಳಿಕ ಅವರನ್ನು ರಾಷ್ಟ್ರಮಟ್ಟದ ರಾಜಕಾರದಲ್ಲಿ ಬಳಸುವ ಯೋಚನೆ ಕಾಂಗ್ರೆಸ್ ಪಕ್ಷಕ್ಕಿರುವಂತಿದೆ. ಅವರಿಗೆ ಬೇರೆ ರಾಜ್ಯಗಳಲ್ಲೂ ಜನಪ್ರಿಯತೆ ಹೆಚ್ಚುತ್ತಿದೆ. ಮೊನ್ನೆ ತಮಿಳುನಾಡಿಗೂ ಹೋಗಿ ಬಂದಿದ್ದಾರೆ ಎಂದ ಲಾಡ್ ಅವರ ಪ್ರಧಾನ ಮಂತ್ರಿ ಹುದ್ದೆಗೆ ಅಭ್ಯರ್ಥಿಯೇ ಅಂತ ಕೇಳಿದ ಪ್ರಶ್ನೆಗೆ, ಆ ಸಂಗತಿಯನ್ನು ಸಾಹೇಬರನ್ನೇ ಕೇಳಬೇಕು ಎಂದರು.

Related