ಸಿಎಂ ಅಕ್ರಮದಲ್ಲಿ ಭಾಗಿಯಾಗಿಲ್ಲ

ಸಿಎಂ ಅಕ್ರಮದಲ್ಲಿ ಭಾಗಿಯಾಗಿಲ್ಲ

ಮಂಡ್ಯ : ಪಿಪಿಇ ಕಿಟ್ ಆರೋಗ್ಯ ರಕ್ಷಾ ಸಾಮಾಗ್ರಿಗಳ ಖರೀದಿಯಲ್ಲಿ ಆರಂಭದಲ್ಲಿ ವ್ಯತ್ಯಾಸವಾಗಿರೊದು ನಿಜ ಎಂದು ನಾಗಮಂಗಲದ ಸಚಿವ ನಾರಾಯಣಗೌಡ ಹೇಳಿದರು.

ಸರ್ಕಾರ ಇದುವರೆಗೂ  550 ರಿಂದ 6೦೦ ಕೋಟಿ ಅಷ್ಟೇ ಖರ್ಚು ಮಾಡಿದರು, ಆದರೆ ವಿರೋಧ ಪಕ್ಷದ ನಾಯಕರು ಇಲ್ಲದ ಆರೋಪ ಮಾಡುತ್ತಿದ್ದಾರೆ.

ಸರ್ಕಾರದ ಟೀಕೆ ಟಿಪ್ಪಣಿ ಬಿಟ್ಟು ಸರ್ಕಾರದ ಜೊತೆ ಕೈಜೋಡಿಸಿ ಕೊರೋನಾ ನಿಯಂತ್ರಣಕ್ಕೆ ಸಹಕರಿಸಲಿ. ಸಿದ್ರಾಮಣ್ಣ ಬೇಕಿದ್ದರೆ ತನಿಖೆ ನಡೆಸಲಿ ನಮಗೆ ಭಯವಿಲ್ಲ. 3 ರಿಂದ 4 ಬಾರಿ ಆಡಳಿತ ನಡೆಸಿರುವ ಇವರು ಸರ್ಕಾರಕ್ಕೆ ಸಹಾಯ ಮಾಡೋದು ಬಿಟ್ಟು ಟೀಕೆ ಮಾಡುತ್ತಿದ್ದಾರೆ.

ಸಿಎಂ ಯಾವುದೇ ಲೂಟಿ ಮಾಡಲು ಬಿಡಲ್ಲ, ಸಂತ್ವ ಅವರು ಅಕ್ರಮದಲ್ಲಿ ಭಾಗಿಯಾಗಿಲ್ಲ ಕೊರೋನಾ ನಿಯಮದಂತೆ ದೇವಾಲಯಗಳಿಗೆ ಪ್ರವೇಶವಿಲ್ಲದಿದ್ದದ್ದರು ಸಚಿವರ ಭೇಟಿ ಕುರಿತಾಗಿ ಪ್ರತಿಕ್ರಿಯಿಸಿ ಸಚಿವರು ಸಾರ್ವಜನಿಕರಲ್ಲವೇ ಜಿಲ್ಲೆಯ ಜೆಡಿಎಸ್ ಜನಪ್ರತಿನಿಧಿಗಳು ಸಚಿವ ನಾರಾಯಣಗೌಡರ ವಿರುದ್ದ ಕಿಡಿಕಾರುತ್ತಿದ್ದರೆ. ಅದೇ ಪಕ್ಷದ ಎಂಎಲ್ಸಿ ಅಪ್ಪಾಜಿಗೌಡ ಒಂದೇ ಕಾರಿನಲ್ಲಿ ಪಯಣಿಸಿದ್ದು ನೆರೆದಿದ್ದ ಜೆಡಿಎಸ್ ಕಾರ್ಯಕರ್ತರಲ್ಲಿ ತೀವ್ರ ಕುತೂಹಲ ಮೂಡಿಸಿತು.

Related