ನ್ಯಾಯಾಂಗ ತೀರ್ಪು ಪರಿಶೀಲಿಸಿ

ನ್ಯಾಯಾಂಗ ತೀರ್ಪು ಪರಿಶೀಲಿಸಿ

ಹುಬ್ಬಳ್ಳಿ : ಹಿರಿಯ ವಕೀಲ ಹಾಗೂ ಹೋರಾಟಗಾರ ಪ್ರಶಾಂತ್ ಭೂಷಣ್ ಅವರ ವಿರುದ್ಧ ನೀಡಿರುವ ನ್ಯಾಯಾಂಗ ನಿಂದನೆ ಪ್ರಕರಣದ ತೀರ್ಪನ್ನು ನ್ಯಾಯಾಲಯ ಮರು ಪರಿಶೀಲಿಸಬೇಕು ಎಂದು ಸಮಾಜ ಸಮುದಾಯದ ಮುಖ್ಯಸ್ಥ ಎಸ್.ಆರ್. ಹಿರೇಮಠ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಮೆರಿಕ, ಕೆನಡಾ ದೇಶದಲ್ಲಿ ಭೂಷಣ್ ಅವರನ್ನು ಬೆಂಬಲಿಸಿ ಅ.22 ರಂದು ಉಪವಾಸ ಸತ್ಯಾಗ್ರಹ ಮಾಡಲಾಗುತ್ತಿದೆ ಎಂದರು.

ಧಾರವಾಡ ಹಾಗೂ ಹಾವೇರಿಯಲ್ಲಿಯೂ ಹೋರಾಟ ನಡೆಯಲಿದೆ. ಸಂವಿಧಾನ ಉಳಿಯಬೇಕಾದರೆ ನ್ಯಾಯಾಂಗದ ಕರ್ತವ್ಯ ಬಹುಮುಖ್ಯವಾಗಿದೆ. ಪ್ರಜಾಪ್ರಭುತ್ವದ 3ನೇ ಆಧಾರ ಸ್ಥಂಭವಾದ ನ್ಯಾಯಾಂಗ ಹಾಗೂ ಸತ್ಯದ ಪರಿಕಲ್ಪನೆಯನ್ನು ಎತ್ತಿ ಹಿಡಿಯಲು ಬೆಂಬಲಿಸಬೇಕು ಎಂದು ಮನವಿ ಮಾಡಿದರು.

Related