ಸಚಿವರ ಬದಲಿಸಲು ನಂಜುಂಡ ಸ್ವಾಮಿ ಪಟ್ಟು

ಸಚಿವರ ಬದಲಿಸಲು ನಂಜುಂಡ ಸ್ವಾಮಿ ಪಟ್ಟು

ಚಾಮರಾಜನಗರ: ಚಾಮರಾಜನಗರದ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಅವರನ್ನು ಬದಲಾಯಿಸಿ ವಿ. ಸೋಮಣ್ಣ ಅವರನ್ನು ನೇಮಿಸಬೇಕು ಎಂದು ಮಾಜಿ ನಗರಸಭಾ ಅಧ್ಯಕ್ಷ ನಂಜುಂಡ ಸ್ವಾಮಿ ಅವರು ಪಟ್ಟು ಹಿಡಿದಿದ್ದಾರೆ

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಉಸ್ತುವಾರಿ ಸಚಿವರನ್ನಾಗಿ ವಿ. ಸೋಮಣ್ಣ ಅವರನ್ನು ನೇಮಿಸಬೇಕು ಎಂದು ಮನವಿ ಮಾಡಿದರು. ಸಚಿವ ಸುರೇಶ್ ಕುಮಾರ್ ಅವರನ್ನು ಮುಂದುವರೆಸಿದರೆ ಕಪ್ಪುಬಾವುಟ ಪ್ರದರ್ಶಿಸುವುದಾಗಿ ಎಚ್ಚರಿಸಿದರು.

ಚಾಮರಾಜನಗರದಲ್ಲಿ ಒಂದು ವರ್ಷದಿಂದ ಸಚಿವ ಸುರೇಶ್ ಕುಮಾರ್ ಅವರು ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿಲ್ಲ. ಇವರಿಗೆ ಅಭಿವೃದ್ಧಿ ಪದದ ಅರ್ಥವೇ ಗೊತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

Related