ತೆಲುಗು ಚಿತ್ರರಂಗದ ಖ್ಯಾತ ನಟ ಚಿರಂಜೀವಿ ಅವರಿಗೆ ಇತ್ತೀಚಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮಭೂಷಣ ದೊರೆತಿರುವುದರಿಂದ ಕನ್ನಡ ಚಿತ್ರರಂಗದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಚಿರಂಜೀವಿಯನ್ನು ಭೇಟಿ ಮಾಡಿ ಅಭಿನಂದನೆ ತಿಳಿಸಿದ್ದಾರೆ.
ಇನ್ನು ಶಿವರಾಜ್ ಕುಮಾರ್ ಅಭಿನಂದಿಸಿದ ಫೋಟೋವನ್ನು ಚಿರಂಜೀವಿ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಶಿವರಾಜ್ ಕುಮಾರ್ ಕುಟುಂಬಕ್ಕೂ ಮತ್ತು ಚಿರಂಜೀವಿ ಅವರ ಕುಟುಂಬಕ್ಕೂ ಹಲವಾರು ವರ್ಷಗಳ ನಂಟಿದೆ ಆದ್ದರಿಂದ ಯಾವುದೇ ಒಂದು ಒಳ್ಳೆ ಕಾರ್ಯಕ್ರಮವಾದರೂ ಕೂಡ ನಟ ಶಿವರಾಜ್ ಕುಮಾರ್ ಮತ್ತು ಚಿರಂಜೀವಿ ಭೇಟಿ ಮಾಡುತ್ತಾರೆ.