ಸಿಸಿಬಿ ಎಸಿಪಿ ಎತ್ತಗಂಡಿ

ಸಿಸಿಬಿ ಎಸಿಪಿ ಎತ್ತಗಂಡಿ

ಬೆಂಗಳೂರು, ಮಾ. 12 : ಸಿಸಿಬಿ ಎಸಿಪಿ ವೆಂಕಟೇಶ್ ಪ್ರಸನ್ನ ಅವರನ್ನು ಎತ್ತಂಗಡಿ ಮಾಡಲಾಗಿದೆ. ಇಲಾಖೆಯಲ್ಲಿ ನಡೆಯುವ ಎಲ್ಲ ಬೆಳವಣಿಗಗಳು ಅಂಡರ್ ವಲ್ಡ್ ಡಾನ್ಗಳಿಗೆ ರವಾನೆ ಆಗುತ್ತಿದ್ದು, ವಿಚಾರಗಳನ್ನು ವಿನಿಮಯ ಮಾಡಿಕೊಂಡು ಎಸಿಪಿ ವೆಂಕಟೇಶ್ ಪ್ರಸನ್ನ ಹಣ ತೆಗೆದುಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಕುಖ್ಯಾತ ಅಂಡರ್ ವರ್ಲ್ಡ್ ಡಾನ್ ರವಿಪೂಜಾರಿ ಸೇರಿದಂತೆ ಅಪರಾಧ ಲೋಕದ ಡಾನ್ಗಳ ಜೊತೆ ನಿಕಟ ಸಂಪರ್ಕ ಹೊಂದಿದ್ದ ಆರೋಪ ಕೇಳಿ ಬಂದ ಹಿನ್ನೆಲೆ ಸಿಸಿಬಿ ಎಸಿಪಿ ವೆಂಕಟೇಶ್ ಪ್ರಸನ್ನ ಎತ್ತಂಗಡಿ ಮಾಡಲಾಗಿದೆ.
ಸದ್ಯ ಸಿಸಿಬಿ ಪೊಲೀಸರ ವಶದಲ್ಲಿರುವ ಪಾತಕಿ ರವಿ ಪೂಜಾರಿಗೆ ವಿಚಾರಣೆ ನಡೆಸಿದ ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ. ರವಿ ಪೂಜಾರಿ, ಬನ್ನಂಜೆ ರಾಜ ಸೇರಿದಂತೆ ವಿವಿಧ ಪಾತಕಿಗಳ ಜೊತೆ ಎಸಿಪಿ ನಿಕಟ ಸಂಪರ್ಕ ಹೊಂದಿರುವುದು ಬೆಳಕಿಗೆ ಬಂದಿದೆ. ರವಿ ಪೂಜಾರಿ ವಿಚಾರಣೆಯಲ್ಲಿ ಬಯಲಾದ ಈ ಮಾಹಿತಿಯನ್ನು ಸಾಕ್ಷಿ ಸಮೇತ ಸಿಸಿಬಿ ಪೊಲೀಸರು, ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರಿಗೆ ನೀಡಿದ್ದಾರೆ. ವರದಿ ನೋಡಿದ ಭಾಸ್ಕರ್ ರಾವ್ ಡಿಜಿಪಿ ಪ್ರವೀಣ್ ಸೂದ್ ಗೆ ನೀಡಿದ್ದು, ತಕ್ಷಣಕ್ಕೆ ಅನ್ವಯವಾಗುವಂತೆ ಎಸಿಪಿ ವೆಂಕಟೇಶ್ ಪ್ರಸನ್ನ ಅವರನ್ನು ವಿವಿಐಪಿ ವಿಭಾಗಕ್ಕೆ ವರ್ಗಾವಣೆ ಮಾಡಿ ಅದೇಶ ನೀಡಲಾಗಿದೆ.

Related