ಬಿಎಸ್ ಪಿ ಅಭ್ಯರ್ಥಿ ಬೆದರಿಕೆ 

ಬಿಎಸ್ ಪಿ ಅಭ್ಯರ್ಥಿ ಬೆದರಿಕೆ 

ಬೊಮ್ಮನಹಳ್ಳಿ: ಬೆದರಿಕೆ ಹಿನ್ನಲೆ ಇಂದು ROಗೆ ದೂರು ನೀಡಿದ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಬಿಎಸ್ ಪಿ ಅಭ್ಯರ್ಥಿ ಉಮಾಪತಿಬಾಬುರವರಿಂದ ದೂರು.

ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಬಹುಜನ ಸಮಾಜ ಪಕ್ಷದ ಅಭ್ಯರ್ಥಿಯಾಗಿ ಕಣದಲ್ಲಿರುವ ಉಮಾಪತಿ ಬಾಬು ಅವರಿಗೆ ಜೀವ ಬೇದರಿಕೆ ಹಾಗೂ ಈ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸದಂತೆ  ಬೆದರಿಕೆ ಹಾಕಿರುವ ಬಗ್ಗೆ ಇಂದು ಬೊಮ್ಮನಹಳ್ಳಿ ಬಿಬಿಎಂಪಿ ಕಚೇರಿಯಲ್ಲಿ ಚುನಾವಣೆ ಅಧಿಕಾರಿಗಳಿಗೆ ಉಮಾಪತಿ ಬಾಬುರವರು ತಮ್ಮ ತಂಡದೊಂದಿಗೆ ದೂರನ್ನು ಸಲ್ಲಿಸಿದ್ದಾರೆ.

RO ಅಜಿತ್ ರವರಿಗೆ ಕಾಂಗ್ರೇಸ್ ಕಾರ್ಯಕರ್ತರಿಂದ ಬೆದರಿಕೆ ಹಾಕುತ್ತಿದ್ದಾರೆಂದು ದೂರು ನೀಡಿದ ಉಮಾಪತಿಬಾಬು. ಉಮಾಪತಿಬಾಬು ಅವರಿಗೆ ಮೊಬೈಲ್ ಗೆ ಕರೆ ಮಾಡಿ, ನೀನು ಕ್ಷೇತ್ರದಲ್ಲಿ ಬಹಳ ಸ್ಪೀಡ್ ಆಗಿ ಹೋಗುತ್ತಿದ್ದೀಯಾ ಇದರ ಪರಿಣಾಮವನ್ನು ಮುಂದೆ ನೀನು ಅನುಭವಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾರೆಂದು ದೂರು ನೀಡಿದ್ದಾರೆ

ನಾಮಪತ್ರ ಸಲ್ಲಿಸಿದಾಗಿನಿಂದಲೂ ಮನೆ ಸುತಮುತ್ತಲೂ ಬೈಕ್ ಗಳಲ್ಲಿ ರೌಂಡ್ಸ್ಬ ಮಾಡುತ್ತಿದ್ದಾರೆಂದ‌ BSP ಉಮಾಪತಿಬಾಬು ಲಿಖಿತ ದೂರು ಸಲ್ಲಿಸಿದ್ದಾರೆ.

ಬಿಎಸ್ ಪಿ ಅಭ್ಯರ್ಥಿ ಉಮಾಪತಿಬಾಬು ತನಗೆ ಹಾಗೂ ಕಾರ್ಯಕರ್ತರಿಗೆ ರಕ್ಷಣೆ ನೀಡಲು ಒತ್ತಾಯಸಿ ಇಂದು ಬೊಮ್ಮನಹಳ್ಳಿ ಬಿಬಿಎಂಪಿ ಕಚೇರಿಯಲ್ಲಿ ಚುನಾವಣೆ ಅಧಿಕಾರಿಗಳಿಗೆ ಉಮಾಪತಿ ಬಾಬುರವರು ತಮ್ಮ ತಂಡದೊಂದಿಗೆ ದೂರನ್ನು ಸಲ್ಲಿಸಿದ್ದಾರೆ.

 

Related