ರಕ್ತದಾನ ಮಾಡಿ ಜೀವ ಉಳಿಸಲು ಕರೆ – ಸುಧಾಕರ್

ರಕ್ತದಾನ ಮಾಡಿ ಜೀವ ಉಳಿಸಲು ಕರೆ – ಸುಧಾಕರ್

ಶಿಡ್ಲಘಟ್ಟ, ಜು 26 : ರಕ್ತದಾನದಿಂದ ದಾನಿಗೆ ಯಾವ ನಷ್ಟವು ಉಂಟಾಗುವುದಿಲ್ಲ, ರಕ್ತದಾನ ಮಾಡಿದರೆ ಹೃದಯದ ಸಮಸ್ಯೆ, ಬಿಪಿ ಕೆಟ್ಟ ಕೊಲೆಸ್ಟಾçಲ್ ಕಡಿಮೆ ಆಗಿ ರಕ್ತ ಸಂಚಾರ ಸುಗಮವಾಗುತ್ತದೆ, ದಾನಿಗಳು ಆರೋಗ್ಯವಂತರಾಗುತ್ತಾರೆ, ಒಬ್ಬರ ಜೀವ ಉಳಿಸುವ ಶಕ್ತಿ ದೇವರು ಕೊಟ್ಟಿರುವಾಗ ಅದನ್ನು ಬಳಸಿಕೊಳ್ಳಬೇಕು ಎಂದು ಸಚಿವ ಸುಧಾಕರ್ ಹೇಳಿದರು .

ತಾಲೂಕಿನ ಹಂಡಿಗನಾಳ ಬಳಿಯ ಬಾಲಾಜಿ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಯುವ ಘಟಕ ಆಶ್ರಯದಲ್ಲಿ ಆಯೋಜಿಸಿದ್ದ ಸ್ವಯಂ ಪ್ರೇರಿತ ಬೃಹತ್  ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿ, ಕಾಂಗ್ರೆಸ್ ನಲ್ಲಿ ಸಿದ್ಧ ರಾಮೋತ್ಸವ ಮಾಡಲಾಗುತ್ತಿದೆ. ಅಲ್ಲಿ ವ್ಯಕ್ತಿಪೂಜೆ ಮಾಡಲಾಗುತ್ತದೆ. ಆದರೆ ಬಿಜೆಪಿಯಲ್ಲಿ ವ್ಯಕ್ತಿ ಪೂಜೆಗೆ ಅವಕಾಶವಿಲ್ಲ ನಮ್ಮಲ್ಲೇನಿದ್ದರೂ ಪಕ್ಷ ಪೂಜೆ ಹಾಗೂ ದೇಶ ಪೂಜೆ ಮಾತ್ರ ಎಂದರು.

ರಕ್ತದಾನ ಶಿಬಿರದಲ್ಲಿ ೧೪೦ ಕ್ಕೂ ಹೆಚ್ಚು ಯೂನಿಟ್ ರಕ್ತ ಸಂಗ್ರಹ ಮಾಡಲಾಯಿತು. ವಿವಿಧ ಕ್ಷೇತ್ರದ ೫೦ ಮಂದಿ ಸಾಧಕರನ್ನು ಸನ್ಮಾನಿಸಲಾಯಿತು.

 

Related