ಚಡ್ಡಿಗೆ ಬೆಂಕಿ ಹಾಕಿ ಎಂದು ಹೇಳ್ತಿರೋ ಸಿದ್ದರಾಮಯ್ಯ, ಅದೇ ಬೆಂಕಿಯಲ್ಲಿ ಸಿಟ್ಟು ಹೋಗ್ತಾರೆ : ಕಟೀಲ್

ಚಡ್ಡಿಗೆ ಬೆಂಕಿ ಹಾಕಿ ಎಂದು ಹೇಳ್ತಿರೋ ಸಿದ್ದರಾಮಯ್ಯ, ಅದೇ ಬೆಂಕಿಯಲ್ಲಿ ಸಿಟ್ಟು ಹೋಗ್ತಾರೆ : ಕಟೀಲ್

ಪದೇ ಪದೇ ಆರ್.ಎಸ್.ಎಸ್. ಚಡ್ಡಿಗೆ ಬೆಂಕಿ ಹಾಕಿ ಎಂದು ಹೇಳಿಕೆ ನೀಡ್ತಿರೋ ಸಿದ್ಧರಾಮಯ್ಯ ಅವರೇ ಆ ಬೆಂಕಿಯಲ್ಲಿ ಸುಟ್ಟು ಹೋಗ್ತಾರೆ ಎಂದು ಕಿಡಿಕಾರಿರೋ ನಳಿನಕುಮಾರ್ ಕಟೀಲ್, ಕಾಂಗ್ರೆಸ್ ನಾಯಕರ ವಿರುದ್ಧ ಹರಿಹಾಯ್ದಿದ್ದಾರೆ.

ಹುಬ್ಬಳ್ಳಿ : ಚಡ್ಡಿಗೆ ಬೆಂಕಿ ಹಾಕುವಂತೆ ಹೇಳ್ತಿರೋ ಸಿದ್ಧರಾಮಯ್ಯ,ಅದೇ ಬೆಂಕೀಲಿ ಸುಟ್ಟು ಹೋಗ್ತಾರೆ ಎಂದು ಬಿಜೆಪಿಯ ರಾಜ್ಯಾಧ್ಯಕ್ಷ ನಳಿನಕುಮಾರ್ ಕಟೀಲ್ ಕಿಡಿಕಾರಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ನಡೆದ ಹತ್ತಾರು ಗಲಭೆಗಳ ಹಿಂದೆ ಕಾಂಗ್ರೆಸ್ ಕೈವಾಡ ಇದೆ. ಬೆಂಕಿ ಹಾಕುವ ಕೆಲಸವನ್ನ ಕಾಂಗ್ರೆಸ್ ಮಾಡುತ್ತಿದೆ. ಶಿವಮೊಗ್ಗ ಮತ್ತು ಹುಬ್ಬಳ್ಳಿಯ ಗಲಭೆ ಹಿಂದೆ ಕಾಂಗ್ರೆಸ್ ಇದೆ. ಆರ್ಎಸ್ಎಸ್ ಒಂದು ಸೇವಾ ಸಂಸ್ಥೆದೇಶಭಕ್ತರನ್ನ ನಿರ್ಮಾಣ ಮಾಡುವ ಸಂಸ್ಥೆ ಆರ್ಎಸ್ಎಸ್ ಆಗಿದೆ. ಇದಕ್ಕೆ ಕೈ ಹಾಕಿದ ನೆಹರು ಮತ್ತು ಇಂದಿರಾ ಗಾಂಧಿ ಸುಟ್ಟು ಹೋಗಿದ್ದಾರೆ. ಕಾಂಗ್ರೆಸ್ ಬೆಂಕಿಗೆ ಕೈ ಹಾಕಿ ಸುಟ್ಟು ಹೋಗುತ್ತದೆ. ಚಡ್ಡಿಗೆ ಬೆಂಕಿ ಹಾಕಲು ಹೇಳಿರೋ ಸಿದ್ಧರಾಮಯ್ಯ ಅವರೇ ಸುಟ್ಟು ಹೋಗುತ್ತಾರೆ.

ರಾಜ್ಯದಲ್ಲಿ ಅತಂತ್ರ ಸ್ಥಿತಿಯನ್ನು ಉಂಟು ಮಾಡಲು ಕಾಂಗ್ರೆಸ್ ಬೆಂಕಿ ಹಚ್ಚುವ ಕೆಲಸಕ್ಕೆ ಮುಂದಾಗಿದೆ. ಮುಂದಿನ ಚುನಾವಣೆ ದೃಷ್ಟಿಯಿಂದ ಕಾಂಗ್ರೆಸ್ ನಾಯಕರು ಇಲ್ಲ ಸಲ್ಲದ ಹೇಳಿಕೆ ನೀಡುತ್ತಿದ್ದಾರೆ.

Related