ಬಿಟಿಎಂ: ಸಂಕ್ರಾಂತಿ  ಹಬ್ಬದಲ್ಲಿ ಗೆದ್ದವರಿಗೆ ಭರ್ಜರಿ ಬಹುಮಾನ

ಬಿಟಿಎಂ: ಸಂಕ್ರಾಂತಿ  ಹಬ್ಬದಲ್ಲಿ ಗೆದ್ದವರಿಗೆ ಭರ್ಜರಿ ಬಹುಮಾನ

ಬೆಂಗಳೂರು: ಕಾಂಗ್ರೆಸ್ ಮುಖಂಡರಾಗಿರುವಂತಹ ಆರ್ ವೆಂಕಟೇಶ್ ಅವರು ಕೋರಮಂಗಲ ಗ್ರಾಮದ ಅಭಿವೃದ್ಧಿಗೆಂದು ಈಗಾಗಲೇ ಹಲವಾರು ಕಾರ್ಯಕ್ರಮಗಳನ್ನು ಕೈಗೊಂಡಿದ್ದು, ಅದೇ ರೀತಿ ಸಂಕ್ರಾಂತಿ ಹಬ್ಬದ ಪ್ರಯುಕ್ತ ಗ್ರಾಮದಲ್ಲಿರುವ ಸಾವಿರಾರು ಜನ ಹೆಣ್ಣು ಮಕ್ಕಳಿಗೆಂದು ವಿವಿಧ ಕಾರ್ಯಕ್ರಮಗಳನ್ನು ಕೈಗೊಂಡಿದ್ದರು.

ಹೌದು, ಸಂಕ್ರಾಂತಿ ಹಬ್ಬದ ಸಂಭ್ರಮದಲ್ಲಿ ಕೋರಮಂಗಲದ ಗ್ರಾಮದಲ್ಲಿರುವಂತಹ ಕಾಂಗ್ರೆಸ್ ಮುಖಂಡರು ಆರ್ ವೆಂಕಟೇಶ್ ಅವರ ನೇತೃತ್ವದಲ್ಲಿ ನಡೆದಿರುವ ಸುಗ್ಗಿ ಹಬ್ಬದ ಕಾರ್ಯಕ್ರಮದಲ್ಲಿ, ಹೆಣ್ಣು ಮಕ್ಕಳಿಗೆಂದು ಮ್ಯೂಸಿಕಲ್ ಚೇರ್, ರಂಗೋಲಿ ಸ್ಪರ್ಧೆ, ಲೆಮನ್ ಸ್ಪೂನ್ ಸ್ಪರ್ಧೆ ಇನ್ನಿತರ ಮನರಂಜನ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಗೆದ್ದವರಿಗೆ, ಮೊದಲ ಸ್ಥಾನ ಪಡೆದವರಿಗೆ ಫ್ರಿಡ್ಜ್, ಎರಡನೇ ಸ್ಥಾನ ಪಡೆದವರಿಗೆ ವಾಷಿಂಗ್ ಮಷೀನ್, ಮೂರನೇ ಸ್ಥಾನ ಪಡೆದವರಿಗೆ ಓವನ್ ನೀಡುವ ಮೂಲಕ ಪ್ರತಿಭೆಗಳನ್ನು ಪ್ರೋತ್ಸಾಹಿಸಿದರು.

ಇನ್ನು ಬಹುಮಾನ ವಿತರಣೆ ಮಾಡುತ್ತಿರುವ ಸಂದರ್ಭದಲ್ಲಿ ರಾಮಲಿಂಗ ರೆಡ್ಡಿ ಅವರ ಧರ್ಮಪತ್ನಿ ಚಾಮುಂಡೇಶ್ವರಿ ಅವರು ಸ್ಪರ್ಧೆಯಲ್ಲಿ ಭಾಗವಹಿಸಿ ಗೆದ್ದಎಲ್ಲಾ ಕ್ರೀಡಾಪಟುಗಳಿಗೂ ಬಹುಮಾನ ವಿತರಣೆಯನ್ನು ನೆರವೇರಿಸಿದರು.

 

Related