ಗೋ ಪೂಜೆ ಸಲ್ಲಿಸಿದ ಬೈರತಿ

ಗೋ ಪೂಜೆ ಸಲ್ಲಿಸಿದ ಬೈರತಿ

ಕೆ.ಆರ್.ಪುರ : ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗೋ ಹತ್ಯೆ ನಿಷೇಧ ಕಾಯಿದೆಗೆ ಎಲ್ಲೆಡೆ ಹರ್ಷ ವ್ಯಕ್ತವಾಗಿದೆ. ಎಂದು ಸಚಿವ ಬೈರತಿ ಬಸವರಾಜ್ ಅಭಿಪ್ರಾಯ ಪಟ್ಟರು.

ಕ್ಷೇತ್ರದ ಹೊರಮಾವು ವಾರ್ಡ್ನ ಯರ್ರಯ್ಯನ ಪಾಳ್ಯ ಗ್ರಾಮದ ಶ್ರೀರಾಮ ದೇವಾಲಯದ ಬಳಿ ಎಸ್ಟಿ ಘಟಕದ ಜಿಲ್ಲಾಧ್ಯಕ್ಷ ಬಾಕ್ಸರ್ ನಾಗರಾಜ್ ಏರ್ಪಡಿಸಿದ್ದ ಗೋ ಪೂಜೆ ಕಾರ್ಯಕ್ರಮದಲ್ಲಿ ಗೋವುಗಳಿಗೆ ಪೂಜೆ ಸಲ್ಲಿಸಿ ನಂತರ ಮಾತನಾಡಿದರು.

ಹಿಂದು ಸಮಾಜದಲ್ಲಿ ಗೋವಿಗೆ ದೇವಿ ಸ್ವರೂಪದಂತೆ ಪೂಜಿಸಲಾಗುತ್ತಿದ್ದು, ಈ ಕಾಯ್ದೆ ಅಂಗೀಕಾರದಿಂದ  ನಾಗರೀಕರು ಹೆಚ್ಚು ಸಂತಸ ವ್ಯಕ್ತಪಡಿಸಿದರು.

ಜಿಲ್ಲೆಗೆ ಒಂದು ಗೋಶಾಲೆ ಸ್ಥಾಪಿಸಿ ಅದನ್ನು ಸರ್ಕಾರ ನಿರ್ವಹಣಾ ಕಾರ್ಯಮಾಡಲು ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಬಿಜೆಪಿ ಪಕ್ಷ ಜನರಿಗೆ ನೀಡಿದ ಏಲ್ಲ ಆಶ್ವಾಸನೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸುತ್ತಿದ್ದು ಸರ್ಕಾರ ರಾಜ್ಯದ ಜನತೆ ಸೇವೆಗೆ ಸದಾಸಿದ್ದವಾಗಿದೆ ಎಂದು ವಿವರಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಬಾಕ್ಸರ್ ನಾಗರಾಜ್, ಮಂಡಲ ಪ್ರಧಾನ ಕಾರ್ಯದರ್ಶಿ ರಾಮಚಂದ್ರಪ್ಪ, ಮುಖಂಡ ಕಲ್ಕೆರೆ ಕೃಷ್ಣಮೂರ್ತಿ, ಮಧುಗೌಡ ಮತ್ತಿತರರಿದ್ದರು.

Related